Advertisement

ಕ್ಯಾಬ್ ಹೆಸರಿನಲ್ಲಿ ಕಿಡ್ನಾಪ್; ಆನ್ ಲೈನ್ ಮೂಲಕ ಹಣ ಸುಲಿಗೆ!

12:11 PM Oct 23, 2017 | Team Udayavani |

ಬೆಂಗಳೂರು; ಕಾಲೇಜು ಉಪನ್ಯಾಸಕರೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿ ಆನ್ ಲೈನ್ ಮೂಲಕ ಹಣ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Advertisement

ಏನಿದು ಘಟನೆ:

ದೊಡ್ಡಬಳ್ಳಾಪುರದ ಕಾಲೋಜಿನಲ್ಲಿ ಉಪನ್ಯಾಸಕರಾಗಿರುವ ಸಂತೋಷ್ ಅಕ್ಟೋಬರ್ 21ರಂದು ದೇವಸ್ಥಾನಕ್ಕೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಏತನ್ಮಧ್ಯೆ ಅ.21ರಂದು ಓಲಾ ಕ್ಯಾಬ್ ಸೋಗಿನಲ್ಲಿ ಬಂದ ಅಪಹರಣಕಾರರು ಲಗ್ಗೆರೆ ಬಳಿ ಸಂತೋಷ್ ಅವರನ್ನು ಕ್ಯಾಬ್ ಗೆ ಹತ್ತಿಸಿಕೊಂಡಿದ್ದರು.

ಬಳಿಕ ಕ್ಯಾಬ್ ನೊಳಗೆ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದರು, ಅಲ್ಲದೇ ಪೇಟಿಎಂ ಮೂಲಕ ಸುಮಾರು 18 ಸಾವಿರ ರೂಪಾಯಿ ಸುಲಿಗೆ ಮಾಡಿದ್ದರು. ಅದಾದ ನಂತರ ಸಂತೋಷ್ ಅವರನ್ನು ಹಲವೆಡೆ ಸುತ್ತಾಡಿಸಿ ನಾಗವಾರ ಬಳಿ ಬಿಟ್ಟು ಪರಾರಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಈ ಬಗ್ಗೆ ಸಂತೋಷ್ ಅವರು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next