Advertisement

ರಾಜಕೀಯಕ್ಕೆ ಖರ್ಗೆ ಜೀ ಮಾದರಿ

10:10 AM Jul 25, 2022 | Team Udayavani |

ಕಲಬುರಗಿ: ಐದು ದಶಕಗಳುದ್ದಕ್ಕೂ ತಮ್ಮದೇಯಾದ ವ್ಯಕ್ತಿತ್ವ ಮೈಗೂಢಿಸಿಕೊಂಡು ಬರುತ್ತಿರುವ ರಾಜ್ಯಸಭೆ ವಿಪಕ್ಷ ನಾಯಕ, ರಾಷ್ಟ್ರೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ರಾಜಕೀಯ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ ಎಂದು ಯುವ ಕಾಂಗ್ರೆಸ್‌ ಮುಖಂಡ ಸಂತೋಷ ಭೀಮಾಶಂಕರ ಬಿಲಗುಂದಿ ಹೇಳಿದರು.

Advertisement

80ನೇ ಜನ್ಮ ದಿನ ಹಾಗೂ ರಾಜಕೀಯ ಕ್ಷೇತ್ರದ 50 ವರ್ಷಗಳು ಪೂರೈಕೆ ನಿಮಿತ್ತ ಬೆಂಗಳೂರಿನಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯುವ ಮುಖಂಡರೊಂದಿಗೆ ಸನ್ಮಾನ ನೆರವೇರಿಸಿ ಭಾವಚಿತ್ರವೊಂದು ಕಾಣಿಕೆ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಐದು ದಶಕಗಳುದ್ದಕ್ಕೂ ಯಾವುದೇ ಒಂದು ಶಬ್ದವೂ ವಿವಾದಕ್ಕೆ ಒಳಗಾದಂತೆ ಹಾಗೂ ಯಾರನ್ನೂ ನೋಯಿಸದ ರೀತಿಯಲ್ಲಿ ಮುನ್ನೆಡೆದುಕೊಂಡು ಬಂದಿರುವುದು ಅದರಲ್ಲೂ ಹೈಕಮಾಂಡ್‌ ನ ಶಿಸ್ತಿನ ಸಿಪಾಯಿಯಾಗಿರುವುದು ಇಂದಿನ ಯುವಕರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರವೀಣ ಪಾಟೀಲ್‌ ಹರವಾಳ, ರಾಜೀವ ಜಾನೆ, ಫಾರೂಕ್‌ ಮನಿಯಾಲ್‌, ರಾಜೇಶ ಸೊಪ್ಪನಾ, ಸಂದೇಶ ಕಮಕನೂರ, ಸಿದ್ಧಾರ್ಥ ಕೋರವಾರ, ಸಿದ್ದು ಮರತೂರ ಸೇರಿದಂತೆ ಮುಂತಾದವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next