Advertisement

Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ

02:51 PM Apr 17, 2024 | Team Udayavani |

ಹುಬ್ಬಳ್ಳಿ: ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭೆ ಚುನಾವಣೆಗೆ‌ ಸ್ಪರ್ಧಿಸುತ್ತಿರುವ ಸ್ಥಳ, ಸಂದರ್ಭ ಸರಿಯಾಗಿಲ್ಲ ಎಂದು ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು, ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತಿಯೊಬ್ಬರು ಸ್ವತಂತ್ರರು. ಆದರೆ ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ. ಸ್ಪರ್ಧಿಸುವುದಿದ್ದರೂ ಮುಂಚಿತವಾಗಿಯೇ ತಯಾರಿ ಮಾಡಿಕೊಳ್ಳಬೇಕಾಗಿತ್ತು ಎಂದರು.

ಯಾರಿಂದಲೂ ಯಾವುದೇ ಸಮಾಜಕ್ಕೆ ಅನ್ಯಾಯ ಆಗಬಾರದು. ದಿಂಗಾಲೇಶ್ವರರು ಅನ್ಯಾಯವಾಗಿದ್ದರೆ ಪರಸ್ಪರ ಮಾತನಾಡಿ ಮುಗಿಸಿಕೊಳ್ಳಬೇಕಾಗಿತ್ತು. ಧರ್ಮಗುರುಗಳು ರಾಜಕಾರಣಕ್ಕೆ ಬರಬಾರದೆಂಬುದೇನಿಲ್ಲ. ಆದರೆ ಕ್ಷೇತ್ರ ಬಹಳ ದೊಡ್ಡದಾಗಿದ್ದು, ಸಮಯ ಕಡಿಮೆ ಇದೆ. ಅಸ್ತಿತ್ವದ ಪ್ರಶ್ನೆಯಾಗಿದ್ದು, ಇದರಲ್ಲಿ ಯಶಸ್ವಿಯಾಗುವುದು ಕಷ್ಟ ಎಂದರು.

ಭಾರತ ಸದೃಢವಾಗಿರಬೇಕು. ಅಂತಹ ಪಕ್ಷ, ವ್ಯಕ್ತಿ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next