Advertisement

Tractor ಕಳ್ಳರನ್ನು ಖೆಡ್ಡಾಗೆ ಕೆಡವಿದ ಖಾಕಿ; ಅಂತಾರಾಜ್ಯ ಕಳ್ಳರ ಬಂಧನ

08:25 PM Aug 27, 2023 | Team Udayavani |

ಮುಧೋಳ : ಟ್ರ್ಯಾಕ್ಟರ್ ಕಳ್ಳತನದ ಆರೋಪದ ಮೇಲೆ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಲೋಕಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮಹಾರಾಷ್ಟ್ರದ ಖಾನಾಪುರದ ಖಾಜೆಸಾಬ ಬನ್ಸೋಡೆ (28) ಹಾಗೂ ಮೈಸಲಗಿಯ ಗ್ರಾಮದ ಸಾಗರ ಬಿರಾಜದಾರ ಬಂಧಿತ ಆರೋಪಿಗಳು.

ಇನ್ನೋರ್ವ ಆರೋಪಿ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತರಿಅದ 1100000 ರೂ. ಮೌಲ್ಯದ ಟ್ರ್ಯಾಕ್ಟರ್ ಇಂಜಿನ್ ಹಾಗೂ 2 ಟ್ರೇಲರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲೂಕಿನ ಜಾಲಿಬೇರ ಕ್ರಾಸ್ ಬಳಿ ಕೆಲ ತಿಂಗಳುಗಳ ಹಿಂದೆ ಟ್ರ್ಯಾಕ್ಟರ್ ಹಾಗೂ 2 ಟ್ರೇಲರ್ ಕಳ್ಳತನವಾಗಿರುವ ಬಗ್ಗೆ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಎಸ್‌ಪಿ ಜಯಪ್ರಕಾಶ, ಎಎಸ್‌ಪಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಶಾಂತವೀರ ಈ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ಠಾಣೆ ಸಿಬ್ಬಂದಿ ಗಿರೀಶ ಕ್ಯಾತನ್, ಜಗದೀಶ ಕಾಂತಿ, ಮಹಾಂತೇಶ ಗುಲಗಾಲಜಂಬಗಿ, ದಾದಾಪೀರ ಅತ್ರಾವತ, ಬಿ.ಎಚ್. ಹಾದಿಮನಿ, ಎಂ.ಎಚ್. ದಳವಾಯಿ, ಶ್ರೀಕಾಂತ ಬೆನಕಟ್ಟಿ, ಕಲ್ಲಪ್ಪ ಪ್ರಜಾರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next