Advertisement

ಖಾದಿ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ: ಕಾಲೆಳೆದ ಪ್ರತಿಪಕ್ಷಗಳು

09:22 PM Aug 28, 2022 | Team Udayavani |

ನವದೆಹಲಿ: “ಖಾದಿಯನ್ನೇ ಬಳಸಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಗುಜರಾತ್‌ನಲ್ಲಿ ಮಾಡಿದ್ದ ಭಾಷಣ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. “ದೇಶಕ್ಕೆ ಖಾದಿ. ರಾಷ್ಟ್ರೀಯ ಧ್ವಜಕ್ಕೆ ಚೀನದ ಪಾಲಿಸ್ಟರ್‌ ಬಟ್ಟೆ! ಯಾವಾಗಿನಂತೆಯೇ ಈ ಬಾರಿಯೂ ಪ್ರಧಾನಿ ಮೋದಿ ಅವರ ಮಾತಿಗೂ ಕ್ರಿಯೆಗೂ ಸಂಬಂಧವೇ ಇಲ್ಲ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Advertisement

ಹಾಗೆಯೇ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೂಡ ವಿರೋಧ ವ್ಯಕ್ತಪಡಿಸಿದ್ದು, “ರಾಷ್ಟ್ರೀಯ ಧ್ವಜ ಸಂಹಿತೆಯಲ್ಲಿ ತಿದ್ದುಪಡಿ ತಂದು, ಖಾದಿ ಉತ್ಪಾದಕರ ಬದುಕನ್ನು ಹಾಳುಗೆಡವಿದ ನಂತರ ಖಾದಿಯ ಬಗ್ಗೆ ಮಾತನಾಡುವ ಲಜ್ಜೆಗೇಡಿತನವು ಹಿಂದುತ್ವ ಸಿದ್ಧಾಂತದ ವ್ಯಕ್ತಿಗಳ ದ್ವಂದ್ವಾರ್ಥಗಳನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಸೇರಿ ಅನೇಕರು ಪ್ರಧಾನಿ ಅವರ ಮಾತು ಮತ್ತೆ ನಡೆಯ ಮಧ್ಯೆ ಸಂಬಂಧವಿಲ್ಲ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next