Advertisement
ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರ ಕುರಿತು ಈಗಾಗಲೇ ಸಚಿವ ಆರ್.ವಿ. ದೇಶಪಾಂಡೆ ಅವರ ಜತೆಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಜತೆಗೆ ಈ ಕುರಿತು ಮಾತುಕತೆ ನಡೆಸಿ, ರಾಜ್ಯದಿಂದ ಆಕ್ಷೇಪ ಸಲ್ಲಿಸಲಾಗುವುದು. ಲೋಕಸಭಾ ಅಧಿವೇಶನದಲ್ಲಿ ಸ್ಥಳೀಯ ಸಂಸದರು ಆಕ್ಷೇಪ ದಾಖಲಿಸುವಂತೆ ಅವರನ್ನು ಭೇಟಿ ಮಾಡಿ ಆಗ್ರಹಿಸಲಾಗುವುದು ಎಂದರು.
ಕೊಡಗು ಅತಿವೃಷ್ಟಿ ನಿರಾಶ್ರಿತರಿಗೆ ಮಾದರಿ ಸೂರು ಯೋಜನೆಗೆ ಸಿಎಂ ಡಿ.7ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಕೃತಿ ದುರಂತದಿಂದ ಸುಮಾರು 840 ಕುಟುಂಬಗಳು ಬೀದಿಪಾಲಾದ ಕುಟುಂಬಗಳಿಗೆ ಸೂರು ನಿರ್ಮಾಣ ತನಕ ಮಾಸಿಕ ತಲಾ 10 ಸಾವಿರ ರೂ. ಬಾಡಿಗೆ ಮೊತ್ತವನ್ನು ನೀಡಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ಖಾದರ್ ಹೇಳಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮುಖಂಡರಾದ ಈಶ್ವರ್ ಉಳ್ಳಾಲ್, ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು.
ಅಕ್ರಮ ಕಟ್ಟಡ; ಎಂಜಿನಿಯರ್ಗಳಿಗೂ ಶಿಕ್ಷೆಅಕ್ರಮ ಕಟ್ಟಡ ನಿರ್ಮಾಣ ಮಾಡುವ ಮಾಲಕರ ಜತೆಗೆ ಇನ್ನು ಮುಂದೆ ಅನುಮತಿ ನೀಡಿದ ಎಂಜಿನಿಯರ್ಗಳಿಗೂ ಶಿಕ್ಷೆಯಾಗಲಿದೆ. ನಗರ ಯೋಜನ ಕಾಯ್ದೆಗೆ ತಿದ್ದುಪಡಿ ತರಲು ಕರಡು ರೂಪಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಈ ತಿದ್ದುಪಡಿ ಪ್ರಕಾರ ನಿಯಮ ಉಲ್ಲಂ ಸಿ ಕಟ್ಟಡ ನಿರ್ಮಿಸಿದ ಇಂಜಿನಿಯರ್ ಬೇರೆ ಕಡೆ ವರ್ಗಾವಣೆ ಹೊಂದಿದ್ದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಸಚಿವ ಖಾದರ್ ಹೇಳಿದರು.