Advertisement

ಒಂಬತ್ತುಕೆರೆಯ ಮನೆ : ಖಾದರ್‌ ತಿರುಗೇಟು

10:04 AM Feb 04, 2020 | sudhir |

ಮಂಗಳೂರು: ಉಳ್ಳಾಲದ ಒಂಬತ್ತುಕೆರೆಯಲ್ಲಿ 20 02ರಲ್ಲೇ 390 ಮನೆಗಳ ನಿರ್ಮಾಣ ಆಗಿದೆ. ವಾಟ್ಸ್‌ ಆ್ಯಪ್‌ನಲ್ಲಿ ಟ್ರೋಲ್‌ ಮಾಡುತ್ತಿರುವ ಬಿಜೆಪಿಯವರು ಅಲ್ಲಿಗೆ ಹೋಗಿ ನೋಡಲಿ. ಸ್ಥಳೀಯರು ಕೋರ್ಟ್‌ ಮೆಟ್ಟಿಲೇರಿದ್ದರಿಂದ ತಡೆಯಾಜ್ಞೆ ಬಂದಿದೆ. ಕೇಸ್‌ ಹಾಕಿದ್ದು ಯಾರು ಎನ್ನುವುದನ್ನು ಶೀಘ್ರ ಬಹಿರಂಗಪಡಿಸುತ್ತೇನೆ ಎಂದು ಶಾಸಕ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಟ್ರೋಲ್‌ ಮಾಡುವವರು ಅಲ್ಲಿ ನಿರ್ಮಿಸಿದ‌ ಮನೆಗಳನ್ನು ನೋಡಿಲ್ಲ ಎಂದವರು ರವಿವಾರ ಟೀಕಿಸಿದರು.

ಒಂಬತ್ತು ಕೆರೆಯಲ್ಲಿ ನಾನು ರೂಪಿಸಿದ ಯೋಜನೆ ಕಾರ್ಯಗತ ಮಾಡುವುದು ಈಗಿನ ಸರಕಾರದ ಜವಾಬ್ದಾರಿ. ಅದನ್ನು ಮೊದಲು ನಿರ್ವಹಿಸಲಿ. ಕೇವಲ ಟ್ರೋಲ್‌ ಮಾಡುವುದರಿಂದ ಉಪ ಯೋಗವಿಲ್ಲ ಎಂದರು.

ಬಿಜೆಪಿಯವರು ಈಗ “ಉಳ್ಳಾಲಗ್‌ ಬಲೆ’ (ಉಳ್ಳಾಲಕ್ಕೆ ಬನ್ನಿ) ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಬರುವುದಾದರೆ ನಾನೇ ಡ್ರೈವ್‌ ಮಾಡಿಕೊಂಡು ಕರೆದೊಯ್ಯುತ್ತೇನೆ ಎಂದು ಸವಾಲು ಹಾಕಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next