Advertisement

ಚೌವತ್ತಿ ಚೌತಿ; ಕೆಸರಕೊಪ್ಪ ಕೆಸರಕೊಪ್ಲ ಆಯ್ತು

03:06 PM Dec 05, 2018 | Team Udayavani |

ಶಿರಸಿ: ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಮಾಹಿತಿ ನೀಡಬೇಕು ಎಂಬ ಕಾರಣಕ್ಕೆ ಹೆದ್ದಾರಿ ಪಕ್ಕ ಹಾಕಲಾದ ಊರುಗಳ ವಿವರದ ಹೆಸರಿನಲ್ಲೂ ಮನಸ್ಸಿಗೆ ಬಂದಂತೆ ಬರೆದು ನಿಲ್ಲಿಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಮುಖ ಊರುಗಳ ಹೆಸರುಗಳನ್ನು ಹೆದ್ದಾರಿ ದಾರಿಯಲ್ಲಿ ದಾಖಲಿಸುವದು ವಾಡಿಕೆ. ಆದರೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆ ಈ ಊರುಗಳ ಹೆಸರನ್ನು ಸರಿಯಾಗಿ ದಾಖಲಿಸಬೇಕಿತ್ತು.

Advertisement

ಆದರೆ, ಕೆಲವೊಂದು ಊರುಗಳ ಹೆಸರನ್ನು ತಪ್ಪಾಗೊ ಬರೆದು ತಪ್ಪೇ ಸರಿಯಾದ ಹೆಸರು ಎಂಬಂತೆ ಬಿಂಬಿಸಿದ್ದಾರೆ. ಯಲ್ಲಾಪುರ ಹೆದ್ದಾರಿಯ ಚೌವತ್ತಿಯನ್ನು ಚೌತಿ ಎಂದು ಕನ್ನಡದಲ್ಲಿ ಬರೆದಿದ್ದಾರೆ. ಸಿದ್ದಾಪುರ ಹೆದ್ದಾರಿಯ ಕೆಸರಕೊಪ್ಪವನ್ನು ಕೆಸರಕೊಪ್ಲ ಎಂದು ಬರೆದಿದ್ದಾರೆ. ತ್ಯಾಗಲಿ ತ್ಯಾಗಳಿ ಆಗಿದೆ. ಆಂಗ್ಲ ಅಕ್ಷರಗಳು ಸರಿಯಾಗಿದ್ದರೂ ಕನ್ನಡದ ಅಕ್ಷರ ದೋಷದಿಂದ ಕೂಡಿದೆ. ಯಾರಿಗೋ ಫಲಕ ಬರೆಯಲು ಗುತ್ತಿಗೆ ಕೊಟ್ಟ ಅಧ್ವಾನದಿಂದ ಊರುಗಳ ಹೆಸರಿಗೇ ಮಸಿ ಬಳಿಯುವ ಕಾರ್ಯವನ್ನು ಸರಕಾರದ ಇಲಾಖೆಯೇ ಮಾಡಿದಂತೆ ಆಗಿದೆ. ಇನ್ನಾದರು ಇದನ್ನು ಸರಿ ಮಾಡಿಸುವ ಕಾರ್ಯಕ್ಕೆ ಇಲಾಖೆಗಳ ಅಧಿಕಾರಿಗಳೂ ಹೋಗದಿರುವದು ಅವರಿಗೆ ಕನ್ನಡದ ಮೇಲೆ ಇರುವ ಪ್ರೇಮಕ್ಕೂ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next