Advertisement

Thrissur: ತಡವಾಗಿ ಎಬ್ಬಿಸಿದ ಕಾರಣಕ್ಕೆ ತಂದೆಯನ್ನೇ ಹಲ್ಲೆಗೈದು ಹತ್ಯೆ ಮಾಡಿದ ಮಗ  

01:02 PM Apr 08, 2023 | Team Udayavani |

ತ್ರಿಶೂರ್:‌ ಕುಡಿದ ಮತ್ತಿನಲ್ಲಿದ್ದ ಮಗನೊಬ್ಬ ತನ್ನ ತಂದೆಯನ್ನೇ ಹಲ್ಲೆಗೈದು ಹತ್ಯೆ ಮಾಡಿದ ಘಟನೆ ಕೇರಳದ ಚೆರ್ಪುವಿನ ಕೊಡನ್ನೂರುನಲ್ಲಿ ಶುಕ್ರವಾರ (ಏ. 7ರಂದು) ನಡೆದಿದೆ.

Advertisement

ಜಾಯ್‌ (60) ಮೃತ ತಂದೆ. ರಿಜೋ(25) ಕೃತ್ಯವೆಸಗಿದ ಮಗ.

ವೇಲ್ಡಿಂಗ್‌ ಕೆಲಸ ಮಾಡಿಕೊಂಡು ಜೀವನವನ್ನು ನಿಭಾಯಿಸಯತ್ತಿದ್ದ ರಿಜೋ ಶುಕ್ರವಾರ ಸಂಜೆಯೇ ಕುಡಿದು ಮನೆಗೆ ಬಂದಿದ್ದಾನೆ. 5 ಗಂಟೆ ಸುಮಾರಿಗೆ ಮನೆಗೆ ಬಂದಾತ, ತಂದೆ – ತಾಯಿಯ ಬಳಿ ತನ್ನನ್ನು 8:15 ಕ್ಕೆ ಎಬ್ಬಿಸಿ ಎಂದು ಹೇಳಿ ಮಲಗಿದ್ದ. ತಂದೆ – ತಾಯಿ ಮಗನನ್ನು ರಾತ್ರಿ 8:30 ಕ್ಕೆ ಎಬ್ಬಿಸಿದ್ದಾರೆ. ಈ ವೇಳೆ ಗಂಟೆ 8:30 ಆದದ್ದು ರಿಜೋನಿಗೆ ತಿಳಿದಿದೆ. ಈ ಕಾರಣಕ್ಕಾಗಿ ಯಾಕೆ ತಡವಾಗಿ ಎಚ್ಚರಿಸಿದ್ದೆಂದು ಜೋರು ಮಾಡಿದ್ದಾನೆ. ಮಗನ ಜೋರು ಧ್ವನಿಗೆ ತಂದೆ ಸುಮ್ಮನಿರು ಎಂದು ಹೇಳಿ ಸಮಾಧಾನ ಮಾಡಲು ಹೋಗಿದ್ದಾರೆ.

ಆದರೆ ಅಪ್ಪನ ಮಾತಿಗೆ ಸಿಟ್ಟಾದ ಮಗ ರಿಜೋ ತಂದೆಯ ಮೇಲೆ ಹಲ್ಲೆಗೈದಿದ್ದಾರೆ. ಈ ವೇಳೆ ವೃದ್ಧ ತಂದೆ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಮತ್ತೆ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಜಾಯ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಘಟನೆ ಬಳಿಕ ಪೊಲೀಸರು ರಿಜೋನನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next