Advertisement

ಶಬರಿಮಲೆ: ದಿನಕ್ಕೆ 80,000 ಮಂದಿ ಮಿತಿ?

06:00 AM Sep 01, 2018 | Team Udayavani |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಪ್ರಸಕ್ತ ಸಾಲಿನಲ್ಲಿ ಅಮರನಾಥ ಯಾತ್ರೆ, ವೈಷ್ಣೋದೇವಿ ಮಾದರಿಯಲ್ಲಿ ಯಾತ್ರಾರ್ಥಿಗಳ ಭೇಟಿಗೆ ಮಿತಿ ನಿಗದಿ ಮಾಡುವ ಸಾಧ್ಯತೆ ಇದೆ. ಪಂಪಾ ನದಿ ದಂಡೆ ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದ ಹಾನಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿ ದಿನ 80 ಸಾವಿರ ಮಂದಿಯನ್ನು ಮಾತ್ರ ದೇಗುಲ ಆವರಣ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಕೇರಳ ಪೊಲೀಸ್‌ ಇಲಾಖೆ ದೇವಸ್ವಂ ಮಂಡಳಿಗೆ ಮನವಿ ಮಾಡಿದೆ. ಆನ್‌ಲೈನ್‌ನಲ್ಲಿ ಯಾತ್ರೆ ಬುಕ್‌ ಮಾಡುವ ಸಂದರ್ಭದಲ್ಲಿಯೇ ಈ ಬಗ್ಗೆ ವ್ಯವಸ್ಥೆ ಮಾಡಬಹುದು ಎಂದು ಸಿಎಂ ವಿಜಯನ್‌ಗೆ ಡಿಜಿಪಿ ಲೋಕನಾಥ್‌ ಬೆಹರಾ ಮನವರಿಕೆ ಮಾಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next