Advertisement

ಶಬರಿಮಲೆ ವಿಧೇಯಕಕ್ಕೆ ಬೆಂಬಲ

01:05 AM Jun 22, 2019 | Team Udayavani |

ಹೊಸದಿಲ್ಲಿ: ಶಬರಿಮಲೆ ದೇಗುಲಕ್ಕೆ 10-50 ವಯೋಮಿತಿ ಮಹಿಳೆ ಯರು ಪ್ರವೇಶಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕೊಲ್ಲಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಎಂ.ಕೆ. ಪ್ರೇಮಚಂದ್ರನ್‌ ಖಾಸಗಿ ಮಸೂದೆ ಮಂಡಿಸಿದ್ದಾರೆ. “ಶಬರಿಮಲೆ ಶ್ರೀ ಧರ್ಮಸಂಸ್ಥೆ ದೇಗುಲ (ವಿಶೇಷ ಸವಲತ್ತು) 2019′ ಎಂಬ ವಿಧೇಯಕದ ಪ್ರಕಾರ, 2018ರ ಸೆ. 1ಕ್ಕಿಂತ ಹಿಂದೆ ಇದ್ದ ಯಥಾಸ್ಥಿತಿ ಜಾರಿಗೆ ತರಬೇಕೆಂದು ಒತ್ತಾಯಿ ಸಲಾಗಿದೆ. ಇದಕ್ಕೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಕೂಡ ಬೆಂಬಲ ನೀಡಿ, ಅಯ್ಯಪ್ಪ ಭಕ್ತರ ರಕ್ಷಣೆಗೆ ಕಾನೂನು ತರಬೇಕು ಎಂದಿದ್ದಾರೆ.

Advertisement

ಕೇರಳದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಅವರೂ ಪ್ರೇಮಚಂದ್ರನ್‌ ಮಂಡಿ ಸಿದ ವಿಧೇಯಕಕ್ಕೆ ಬೆಂಬಲ ಸೂಚಿಸಿ ದ್ದಾರೆ. ತಿರುವನಂತಪುರದಲ್ಲಿ ಮಾತನಾಡಿದ ಅವರು, ಇದೊಂದು ಸ್ವಾಗತಾರ್ಹ ಮಸೂದೆ. ಶಬರಿಮಲೆ ಸಂಸ್ಕೃತಿ, ಪದ್ಧತಿ ರಕ್ಷಿಸಲು ಕಾನೂನು ಜಾರಿ ಆಗಬೇಕೆಂದು ಸೆಪ್ಟಂಬರ್‌ನಲ್ಲಿ ನಾನೇ ಹೇಳಿದ್ದೆ’ ಎಂದಿದ್ದಾರೆ. ಇದು ಲಿಂಗ ತಾರಮ್ಯಕ್ಕೆ ಪ್ರೋತ್ಸಾಹ ನೀಡುತ್ತ ದಲ್ಲವೇ ಎಂದು ಪ್ರಶ್ನಿಸಿದಾಗ “ನಾನು ವಿದ್ವಾಂಸನಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next