Advertisement

ಅಬ್ದುಲ್ ಕಲಾಂ ಅವರ ಅಪ್ಪಟ ಅಭಿಮಾನಿಯನ್ನು ಕೊಲೆಗೈದ ದುಷ್ಕರ್ಮಿಗಳು

08:48 PM Dec 20, 2020 | Adarsha |

ಕೊಚ್ಚಿ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪ್ರತಿಮೆಗೆ ಪುಷ್ಪಾಲಂಕಾರ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವ್ಯಕ್ತಿಯೋರ್ವ ಅಸೂಯೆಯ ಕಾರಣಕ್ಕೆ ಬಲಿಯಾದ ಘಟನೆ ಕೇರಳದ ಕೊಚ್ಚಿಯ ಮರೀನ್ ಡೈವ್ ಎಂಬಲ್ಲಿ ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಶಿವದಾಸನ್ (63) ಎಂದು ಗುರುತಿಸಲಾಗಿದೆ. ಈತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಪ್ಪಟ ಅಭಿಮಾನಿಯಾಗಿದ್ದು, ಹಿಂದೊಮ್ಮೆ ಅವರು ಈತನಿಗೆ 500 ರೂ ಸಹಾಯ ಧನ ನೀಡಿದ್ದರು ಎನ್ನಲಾಗಿದೆ. ಅಲ್ಲದೆ ಶಿವದಾಸನ್ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸ್ಮರಣೆಗಾಗಿ ಪ್ರತಿ ನಿತ್ಯ ಹೂಗಳನ್ನು ತಂದು ಪುತ್ಥಳಿಯನ್ನು ಸಿಂಗರಿಸುತ್ತಿದ್ದರು. ಇವರ ಈ ಕಾರ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಹಲವಾರು ಜನರಿಂದ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದರು ಎನ್ನಲಾಗಿದೆ.

ದಿನೇ ದಿನೇ ಜನಪ್ರಿಯವಾಗುತ್ತಿದ್ದ ಶಿವದಾಸನ್ ಬೆಳವಣಿಗೆಯನ್ನು ಸಹಿಸದ ಕೆಲವು ದುಷ್ಕರ್ಮಿಗಳು ಆತ ಮಲಗುತ್ತಿದ್ದ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪುತ್ಥಳಿಯ ಜಾಗದಲ್ಲೇ ಆತನನ್ನು ಕೊಲೆಗೈದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ರೋಲಿಗರ ವಿರುದ್ಧ ಗುಡುಗಿದ ಊರ್ಮಿಳಾ: ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದ ನಟಿ !

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರಿಗೆ ರಾಜೇಶ್ ಎಂಬಾತನ ಮೇಲೆ ಶಂಕೆ  ವ್ಯಕ್ತಪಡಿಸಿದ್ದಾರೆ. ಈತ ಕೆಲ ದಿನಗಳ ಹಿಂದೆ ಶಿವದಾಸನ್ ಅವರ ಮೆಲೆ ಹಲ್ಲೆ ನಡೆಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next