Advertisement

Kerala Tragedy; ಭೂಕುಸಿತ ಉಂಟಾಗಿದೆ, ಬಂದು ನಮ್ಮನ್ನು ರಕ್ಷಿಸಿ: ನರ್ಸ್‌ ಕೊನೇ ಕರೆ!

11:57 PM Jul 31, 2024 | Team Udayavani |

ಮೇಪ್ಪಾಡಿ: ಭೂಕುಸಿತದಿಂದ ಅಸುನೀಗಿದವರ ಒಂದೊಂದೇ ಕರುಣಾ ಕಥೆಗಳು ಹೊರಕ್ಕೆ ಬರುತ್ತಿವೆ. ಆ ಪೈಕಿ ವೈದ್ಯಕೀಯ ಕಾಲೇ ಜಲ್ಲಿ ಕೆಲಸ ಮಾಡು ತ್ತಿದ್ದ ನರ್ಸ್‌ ನೀತು ಜೋಜೋ ಅವರದ್ದೂ ಒಂದು. ರಾತ್ರಿ 1 ಗಂಟೆ ಸುಮಾರಿಗೆ ನದಿ ಯಂತೆ ಭೋರ್ಗರೆವ ಸದ್ದು ಅವರನ್ನು ಎಚ್ಚರಗೊಳ್ಳುವಂತೆ ಮಾಡಿತ್ತು.

Advertisement

ರಾತ್ರಿ 1.30, 2.20ಕ್ಕೆ ಕಣ್ಣೀರಿಡುತ್ತಾ, ವೃತ್ತಿ ಮಾಡುತ್ತಿದ್ದ ಆಸ್ಪತ್ರೆಗೆ ಕರೆ ಮಾಡಿ, ಭೂಕುಸಿತ ಸಂಭವಿಸಿದ್ದು, ಕೊಚ್ಚಿ ಹೋಗುತ್ತೇವೆ ಎಂದಿದ್ದಾರೆ.

2.50ಕ್ಕೆ ಮತ್ತೆ ಆಸ್ಪತ್ರೆಯವರು ಕರೆ ಮಾಡಿದಾಗಲೂ ನೀತು ಭಯ ತೋಡಿಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ 3ನೇ ಭೂಕುಸಿತ ಸಂಭವಿಸಿದ್ದು, ನುಗ್ಗಿ ಬಂದ ಪ್ರವಾ ಹಕ್ಕೆ ನೀತು ಕೊಚ್ಚಿ ಹೋಗಿದ್ದಾರೆ. ನೀತು ಅವರ ಪತಿ, ಪುತ್ರ ಹಾಗೂ ಅತ್ತೆ ಮಾವ ಬದುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next