Advertisement

Kerala; ವಿದ್ಯಾರ್ಥಿ ತರಗತಿಗೆ ಬರದಿದ್ದಲ್ಲಿ ತತ್‌ಕ್ಷಣ ಪೋಷಕರಿಗೆ ಮಾಹಿತಿ

11:49 PM May 14, 2024 | Team Udayavani |

ಪೆರ್ಲ: ತರಗತಿಗಳು ಆರಂಭಗೊಂಡು ನಿಗದಿತ ಸಮಯದೊಳಗೆ ವಿದ್ಯಾರ್ಥಿಗಳು ಬಾರದೆ ಇದ್ದಲ್ಲಿ ಆ ವಿಷಯವನ್ನು ತತ್‌ಕ್ಷಣ ಹೆತ್ತವರು/ ಪೋಷಕರಿಗೆ ಕರೆಮಾಡಿ ತಿಳಿಸಬೇಕು ಎಂದು ಕೇರಳ ರಾಜ್ಯ ಸಾರ್ವತ್ರಿಕ ಶಿಕ್ಷಣ ನಿರ್ದೇಶಕರು ಎಲ್ಲ ಶಾಲೆಗಳಿಗೂ ನಿರ್ದೇಶ ನೀಡಿದ್ದಾರೆ.

Advertisement

ಮಕ್ಕಳು ಮನೆಯಿಂದ ಶಾಲೆಗೆಂದು ಹೊರಟು ಬಳಿಕ ಶಾಲೆಗೆ ತಲುಪದಿದ್ದಲ್ಲಿ ಆ ವಿಷಯವನ್ನು ಪೊಲೀಸರಿಗೂ ತಿಳಿಸಬೇಕೆಂದು ನಿರ್ದೇಶಕರು ತಿಳಿಸಿದ್ದಾರೆ. ಶಾಲೆಗಳಲ್ಲಿ ಸ್ಥಿರ ದೂರವಾಣಿ ಸರಿಯಾಗಿ ಕಾರ್ಯವೆಸಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಶೈಕ್ಷಣಿಕ ವರ್ಷ ಪುನರಾರಂಭಗೊಳ್ಳುವ ಮೊದಲು ಮೇ 25ರಿಂದ 30 ರೊಳಗಾಗಿ ಆಯಾ ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಉಪಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ನೇರವಾಗಿ ಭೇಟಿ ನೀಡಿ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಬೇಕೆಂದು ನಿರ್ದೇಶಕರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next