Advertisement

President ವಿರುದ್ಧ ಸುಪ್ರೀಂಗೆ ಕೇರಳ ಸರಕಾರ ದೂರು: ಬಿಜೆಪಿ ಆಕ್ಷೇಪ

01:19 AM Mar 25, 2024 | Team Udayavani |

ತಿರುವನಂತಪುರ: ಕೇರಳ ವಿಧಾನಸಭೆ ಅಂಗೀಕರಿಸಿ ರುವ 4 ಮಸೂದೆಗಳನ್ನು ಯಾವುದೇ ಕಾರಣ ನೀಡದೇ ತಡೆಹಿಡಿದಿರುವುದನ್ನು ಪ್ರಶ್ನಿಸಿ ರಾಷ್ಟ್ರಪತಿಗಳ ವಿರುದ್ಧ ಕೇರಳದ ಎಡಪಕ್ಷ ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವುದನ್ನು ಬಿಜೆಪಿ ಖಂಡಿ ಸಿದೆ.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ವಿ.ಮುರಳೀಧರನ್‌, “ಇದು ಮಹಿಳೆ ಮತ್ತು ಬುಡಕಟ್ಟು ಸಮುದಾಯದ ಕುರಿತು ಸಿಪಿಎಂ ಹೊಂದಿರುವ ತಾರತಮ್ಯವನ್ನು ಪ್ರತಿಫ‌ಲಿಸುತ್ತದೆ. ಸಿಪಿಎಂ ಸದಾ ಮಹಿಳಾ ವಿರೋಧಿ ನಿಲುವನ್ನೇ ಅಳವಡಿಸಿಕೊಂಡಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆ ಯಾದಾಗಲೂ ಅದನ್ನು ಸಿಪಿಎಂ ವಿರೋಧಿಸಿತ್ತು. ಇದೀಗ ಮೊದಲ ಬಾರಿಗೆ ರಾಷ್ಟ್ರಪತಿ ವಿರುದ್ಧ ರಾಜ್ಯ ಸರಕಾರವೊಂದು ಸುಪ್ರೀಂ ಮೊರೆ ಹೋಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next