Advertisement

SFI ಪ್ರತಿಭಟನೆ-ದೂರು ದಾಖಲು: ಕೇರಳ ರಾಜ್ಯಪಾಲ ಆರೀಫ್‌ ಖಾನ್‌ ಗೆ Z+ ಭದ್ರತೆ

04:10 PM Jan 27, 2024 | Team Udayavani |

ತಿರುವನಂತಪುರಂ: ಸಿಪಿಐ(ಎಂ) ಬೆಂಬಲಿತ ಎಸ್‌ ಎಫ್‌ ಐ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇರಳ ರಾಜ್ಯಪಾಲ ಅರೀಫ್‌ ಮೊಹಮ್ಮದ್‌ ಖಾನ್‌ ಅವರಿಗೆ ಕೇಂದ್ರ ಸರ್ಕಾರ ಝಡ್‌ ಪ್ಲಸ್‌ ಭದ್ರತೆ ಒದಗಿಸಲು ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:Ratnagiri- Watch Video: ಪೊಲೀಸ್‌ ಠಾಣೆಯೊಳಗೆ ನುಗ್ಗಿ ಶ್ವಾನವನ್ನು ಹೊತ್ತೊಯ್ದ ಚಿರತೆ!

ಶನಿವಾರ (ಜನವರಿ 27) ಬೆಳಗ್ಗೆ ಕೊಲ್ಲಂ ಜಿಲ್ಲೆಯಲ್ಲಿ ಎಸ್‌ ಎಫ್‌ ಐ ಕಾರ್ಯಕರ್ತರು ರಾಜ್ಯಪಾಲ ಖಾನ್‌ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲ ಖಾನ್‌ ಅವರು ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದ ಎಸ್‌ ಎಫ್‌ ಐ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು.

ರಾಜ್ಯಪಾಲ ಖಾನ್‌ ಅವರು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು. ಆದರೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಖಾನ್‌ ಆರೋಪಿಸಿದ್ದರು.

ಎಸ್‌ ಎಫ್‌ ಐ ಕಾರ್ಯಕರ್ತರ ವಿರುದ್ಧ ಎಫ್‌ ಐಆರ್‌ ದಾಖಲಿಸಿದ ಪ್ರತಿ ನೀಡುವಂತೆ ನಾನು ಪ್ರತಿಭಟನೆ ನಡೆಸಿರುವುದಾಗಿ ರಾಜ್ಯಪಾಲ ಖಾನ್‌ ತಿಳಿಸಿದ್ದಾರೆ. ಈ ಬೆಳವಣಿಗೆ ನಂತರ ಪೊಲೀಸರು 17 ಎಸ್‌ ಎಫ್‌ ಐ ಕಾರ್ಯಕರ್ತರ ಮೇಲೆ ಎಫ್‌ ಐಆರ್‌ ದಾಖಲಿಸಿದ ಪ್ರತಿಯನ್ನು ನೀಡಿದ ನಂತರ ರಾಜ್ಯಪಾಲರು ಸ್ಥಳದಿಂದ ತೆರಳಿದ್ದರು.

Advertisement

ಈ ಘಟನೆಯ ನಂತರ ಕೇಂದ್ರ ಗೃಹ ಸಚಿವಾಲಯ ರಾಜ್ಯಪಾಲ ಖಾನ್‌ ಅವರಿಗೆ ಝಡ್‌ ಪ್ಲಸ್‌ ಭದ್ರತೆ ನೀಡುವಂತೆ ಕೇರಳ ರಾಜಭವನಕ್ಕೆ ಸೂಚನೆ ನೀಡಿರುವುದಾಗಿ ಕೇರಳ ರಾಜಭವನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next