Advertisement

ನೋವಿನ ಚೀರಾಟ, ಜೀವ ಉಳಿಸಿಕೊಳ್ಳಲು ಒದ್ದಾಟ; ಕರಿಪುರ್ ವಿಮಾನ ದುರಂತದ ಮನಕಲಕುವ ದೃಶ್ಯಗಳು

01:21 AM Aug 09, 2020 | mahesh |
ನೋವಿನ ಚೀರಾಟ, ರಕ್ತ ಮೆತ್ತಿದ ಬಟ್ಟೆಗಳ ಮಧ್ಯೆ ಜೀವ ಉಳಿಸಿಕೊಳ್ಳಲು ಒದ್ದಾಟ, ಧಾರಾಕಾರ ಸುರಿಯುತ್ತಿರುವ ಮಳೆ, ಅಳುತ್ತಿರುವ ಮಕ್ಕಳು, ಚೀರುತ್ತಿರುವ ಆ್ಯಂಬೆಲೆನ್ಸ್ ನ ಸೈರನ್.. ಕೋಯಿಕ್ಕೋಡ್ ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಕಂಡುಬಂದ ಮನಕಲಕುವ ದೃಶ್ಯಗಳು! ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಕೇರಳ ರಾಜ್ಯದ ಕೋಯಿಕ್ಕೋಡ್ ಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಐಎಕ್ಸ್-344 ವಿಮಾನವು ರನ್ ವೇ ನಲ್ಲಿ ಜಾರಿ ಅನಾಹುತ ಸಂಭವಿಸಿತ್ತು. ಘಟನೆಯಲ್ಲಿ ಇದುವರೆಗೆ 20 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next