Advertisement

ಕೇರಳ ಮಳೆಗೆ 2 ಸಾವು

02:43 AM Jul 21, 2019 | Team Udayavani |

ತಿರುವನಂತಪುರ:ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ತಮಿಳುನಾಡಿನ ಮೂವರು ಮೀನುಗಾರರು ಸೇರಿದಂತೆ ನಾಲ್ವರು ನಾಪತ್ತೆ ಯಾಗಿದ್ದಾರೆ. ಕಾಸರಗೋಡಿನ ಕುಡುಲೆ ಯಲ್ಲಿ ಶನಿವಾರದವರೆಗೆ 30 ಸೆಂ.ಮೀ ದಾಖಲೆ ಮಳೆಯಾಗಿದೆ. ಇಡುಕ್ಕಿಯಲ್ಲಿ ಕೊನ್ನತ್ತಾಡಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ.

Advertisement

ಹಳದಿ ಅಲರ್ಟ್‌: ಹಿಮಾಚಲ ಪ್ರದೇಶದಲ್ಲಿ ಶನಿವಾರ ಮಧ್ಯಮ ಪ್ರಮಾಣದ ಮಳೆಯಾಗಿದ್ದು, ಮುಂದಿನ ವಾರ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಹಳದಿ ಅಲರ್ಟ್‌ ಘೋಷಿಸಿದೆ. 24 ರಂದು ಶಿಮ್ಲಾ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದ್ದು, ಜುಲೈ 26 ವರೆಗೂ ಮುಂದುವರಿಯಲಿದೆ. .

ಸುಧಾರಣೆ: ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಅಸ್ಸಾಂನಲ್ಲಿ ಈಗ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಮಳೆಯಿಂದಾಗಿ ಮೃತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. 33 ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪಂಜಾಬ್‌, ರಾಜಸ್ಥಾನ, ಹೊಸದಿಲ್ಲಿಗಳಲ್ಲಿಯೂ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next