Advertisement

ಕೇರಳ; ಪಾದ್ರಿ ಸೇರಿ 50 ಕ್ರಿಶ್ಚಿಯನ್‌ ಕುಟುಂಬಗಳು ಕಮಲ ಪಕ್ಷ ಸೇರ್ಪಡೆ

02:22 AM Jan 01, 2024 | Team Udayavani |

ತಿರುವನಂತಪುರ: ಕೇರಳದಲ್ಲಿ ಕ್ರಿಶ್ಚಿಯನ್ನರ ವಿಶ್ವಾಸ ಗಳಿಸಲು ಬಿಜೆಪಿ ಸ್ನೇಹಯಾತ್ರೆ ಕಾರ್ಯಕ್ರಮ ಆಯೋಜಿಸಿರುವಂತೆಯೇ ಓರ್ವ ಪಾದ್ರಿ ಸಹಿತ 50 ಕ್ರಿಶ್ಚಿಯನ್‌ ಕುಟುಂಬಗಳು ರವಿವಾರ ಬಿಜೆಪಿಗೆ ಸೇರ್ಪಡೆ ಗೊಂಡಿರುವುದು ವರದಿಯಾಗಿದೆ.

Advertisement

ಈ ಸಂಬಂಧಿಸಿದಂತೆ ಬಿಜೆಪಿ ಕೇರಳ ಘಟಕವು ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ಪ್ರಕಾರ ಕೇಂದ್ರ ಖಾತೆ ಸಹಾ ಯಕ ಸಚಿವರಾದ ವಿ.ಮುರಳೀಧರನ್‌ ಅವರ ನೇತೃತ್ವದಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆ ನೀಲಕ್ಕಲ್‌ ಭದ್ರಾಸನಂನ ಆರ್ಥೊಡಾಕ್ಸ್‌ ಚರ್ಚ್‌ ಕಾರ್ಯದರ್ಶಿ ಫಾದರ್‌ ಶೈಜು ಕುರಿಯನ್‌ ಹಾಗೂ 50 ಕ್ರಿಶ್ಚಿಯನ್‌ ಕುಟುಂಬಗಳು ಬಿಜೆಪಿ ಸೇರ್ಪಡೆ ಗೊಂಡಿವೆ ಎಂದು ತಿಳಿಸಲಾಗಿದೆ.

ಇದೇ ವೇಳೆ ಬಿಜೆಪಿ ಸೇರ್ಪಡೆಗೊಂಡ ಕ್ರಿಶ್ಚಿಯನ್ನರಿಗೆ ಜಾಲತಾಣದಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಎಂ ಬೆಂಬಲಿಗರು ಕಾಮೆಂಟ್‌ಗಳಲ್ಲಿ ಬೆದರಿಕೆ ಹಾಕಿದ್ದಾರೆಂದೂ ಬಿಜೆಪಿ ಆರೋಪಿಸಿದ್ದು, ಹೀಗೇ ಮುಂದುವರಿದರೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next