Advertisement

ಕೇರಳದ ಎಂಟು ಪ್ರವಾಸಿಗರನ್ನು ಬಲಿ ತೆಗೆದುಕೊಂಡ ರೆಸಾರ್ಟ್‌ ಪರವಾನಗಿ ರದ್ದು

10:23 AM Feb 14, 2020 | Team Udayavani |

ಕಾಠ್ಮಂಡು: ಎಂಟು ಮಂದಿ ಕೇರಳದ ಪ್ರವಾಸಿಗರ ಸಾವಿಗೆ ಕಾರಣವಾಗಿದ್ದ ರೆಸಾರ್ಟ್‌ಗೆ ನೀಡಲಾಗಿದ್ದ ಪರವಾನಗಿಯನ್ನು ನೇಪಾಳ ಸರಕಾರ ರದ್ದುಗೊಳಿಸಿದೆ. ಜ.21ರಂದು ನಡೆದಿದ್ದ ದುರಂತದಲ್ಲಿ ಮಕ್ವಾನ್‌ಪುರ ಜಿಲ್ಲೆಯ ರೆಸಾರ್ಟ್‌ನಲ್ಲಿ ಕೇರಳದಿಂದ ಪ್ರವಾಸಕ್ಕೆ ಆಗಮಿಸಿದ್ದ 15 ಮಂದಿ ತಂಗಿದ್ದರು.

Advertisement

ಈ ಸಂದರ್ಭದಲ್ಲಿ ಉಂಟಾಗಿದ್ದ ಅನಿಲ ಸೋರಿಕೆಯಿಂದ ನಾಲ್ವರು ಅಪ್ರಾಪ್ತರು ಸಹಿತ 8 ಮಂದಿ ಸಾವಿಗೀಡಾಗಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸಿದ್ದ ಸಮಿತಿ ರೆಸಾರ್ಟ್‌ನಲ್ಲಿ ಭದ್ರತೆ ಮತ್ತು ನಿರ್ವಹಣ ವ್ಯವಸ್ಥೆ ಸಮರ್ಪಕವಾಗಿಲ್ಲದ್ದೇ ದುರಂತಕ್ಕೆ ಕಾರಣ. ಜತೆಗೆ ಯಾವುದೇ ಸುರಕ್ಷತಾ ಕ್ರಮಗಳೂ ಅಲ್ಲಿ ಇರಲಿಲ್ಲ ಎಂದು ವರದಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next