Advertisement

Keradi: ಮೂಡುಗಲ್ಲು ಗುಹಾಂತರ ದೇಗುಲಕ್ಕೆ ಜೂನಿಯರ್‌ ಎಂಟಿಆರ್‌, ರಿಷಬ್ ಭೇಟಿ

09:48 PM Sep 01, 2024 | Team Udayavani |

ಕುಂದಾಪುರ; ಕೆರಾಡಿ ಗ್ರಾಮದ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ರವಿವಾರ ತೆಲುಗು ನಟ ಜೂನಿಯರ್‌ ಎನ್‌ಟಿಆರ್‌  ಹಾಗೂ ರಿಷಬ್‌ ಶೆಟ್ಟಿ(ನಂದಮೂರಿ ತಾರಕ್‌ ರಾಮ್‌) ಅವರು ಭೇಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೊಲ್ಲೂರಿನಿಂದ ಇಲ್ಲಿಗೆ ಆಗಮಿಸಿದ ಅವರು ಇಲ್ಲಿನ ದೇವಸ್ಥಾನ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಕಂಡು ಅತೀವ ಖುಷಿಪಟ್ಟರು.

Advertisement

ಪ್ರಕೃತಿಯ ವಿಸ್ಮಯ ಈ ದೇಗುಲ
ಪ್ರಕೃತಿಯಿಂದಲೇ ನಿರ್ಮಿತವಾಗಿರುವ ವಿಶಿಷ್ಟ, ವಿಶೇಷವಾಗಿದೆ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನ. ಗುಹೆಯೇ ಶಿವನಿಗೆ ಆಲಯವಾಗಿದೆ. ಇಲ್ಲಿ ಗುಡಿಯೊಳಗೆ ಸುಮಾರು 20 30 ಅಡಿಗಳಷ್ಟು ವಿಶಾಲವಾದ ಜಾಗದಲ್ಲಿ ಹರಡಿರುವ ನೀರು, ಅಲ್ಲಿರುವ ಹಲವು ಬಗೆಯ ಮೀನುಗಳು, ನೀರಿನಲ್ಲಿಯೇ ನಿಂತು ದೇವರಿಗೆ ಕೈ ಮುಗಿಯುವ ಕ್ಷಣ, ಕಾಲಿಗೆ ಮುತ್ತಿಕ್ಕುವ ಮೀನುಗಳು ಎಲ್ಲವೂ ಒಂದು ರೀತಿಯ ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. ಕತ್ತಲಲ್ಲಿ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next