Advertisement

ನಗರಾಭಿವೃದ್ಧಿ ಕನಸು ಕಂಡಿದ್ದ ಕೆಂಪೇಗೌಡರು

07:34 AM Jun 28, 2019 | Suhan S |

ಚಾಮರಾಜನಗರ: ನಾಡಪ್ರಭು ಎಂದೇ ಖ್ಯಾತರಾದ ಕೆಂಪೇಗೌಡರು ಅಂದಿನ ಕಾಲದಲ್ಲೇ ನಗರನಿರ್ಮಾಣ ಮಾಡುವ ಕುರಿತು ಆಲೋಚನೆ ಮಾಡಿದ್ದರು, ಅವರು ಬೆಂಗಳೂರು ಕಟ್ಟುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನಾಡುನುಡಿಯ ರಕ್ಷಣೆಯೇ ಆಶಯವಾಗಿತ್ತು ಎಂದು ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

Advertisement

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಂಪೇ ಗೌಡರು ದೂರದೃಷ್ಟಿಯುಳ್ಳ ಆಡಳಿತಗಾರ ರಾಗಿದ್ದರು. ಅವರು ಕಟ್ಟಿದ ಬೆಂಗಳೂರು ಇಂದು ಜಗದ್ವಿಖ್ಯಾತ ನಗರವಾಗಿ ಬೆಳೆದಿದೆ. ಕನ್ನಡಿಗರ ಹೆಮ್ಮೆಯ ನಾಯಕ ಕೆಂಪೇಗೌಡರು ಎಂದು ಬಣ್ಣಿಸಿದರು.

ವಿಶ್ವದಲ್ಲೇ ಪ್ರಮುಖ ಸಿಲಿಕಾನ್‌ ಸಿಟಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪನಿರ್ದೇಶಕಿ, ಸಾಹಿತಿ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿ, ನಗರಾ ಭಿವೃ ದ್ಧಿಯ ಮೊದಲ ಕನಸು ಕಂಡವರು ನಾಡಪ್ರಭು ಕೆಂಪೇಗೌಡರು. ತಮ್ಮ 9 ನೇ ವಯಸ್ಸಿನಲ್ಲೇ ಗುರುಕುಲ ವಿದ್ಯಾಭ್ಯಾಸ ಪಡೆದರು, 1531 ರಲ್ಲಿ ಪಟ್ಟಕ್ಕೆ ಬಂದ ನಂತರ ಒಂದು ನಗರವನ್ನು ಹೇಗೆ ನಿರ್ಮಾಣ ಮಾಡಬೇಕು ಎಂದು ಆಲೋಚನೆ ಮಾಡಿ, 4 ದಿಕ್ಕು ಗಳಲ್ಲಿ ಗಡಿರೇಖೆ ನಿರ್ಮಿಸಿ ಹೊನ್ನೇರುಕಟ್ಟಿ ಭೂಮಿ ಪೂಜೆ ಮಾಡಿದರು, ಅಂದು ಮಾಡಿದ ಭೂಮಿ ಪೂಜೆಯ ಫಲವಾಗಿ ಸಣ್ಣ ಗ್ರಾಮವಾಗಿದ್ದ ಬೆಂದಕಾ ಳೂರು ಇಂದು ಬೃಹದಾಕಾರವಾಗಿ ಗಡಿಯನ್ನು ಮೀರಿ ವಿಶಾಲವಾಗಿ ಬೆಳೆದು, ವಿಶ್ವದಲ್ಲೇ ಸಿಲಿಕಾನ್‌ ಸಿಟಿ ಎಂದು ಖ್ಯಾತಿಗಳಿಸಿದೆ ಎಂದರು.

ಜಾತ್ಯತೀತ ಮನೋಭಾವ: ಕುವೆಂಪು ಹೇಗೆ ಜಾತ್ಯ ತೀತ ನಿಲುವು ಹೊಂದಿದ್ದರೋ ಆ ಮಾದರಿಯಲ್ಲಿ ಕೆಂಪೇಗೌಡರು ಜಾತ್ಯತೀತ ಮನೋಭಾವ ಹೊಂದಿ ದ್ದು, ಕಸುಬುಗಳಿಗೆ ಆಧಾರವಾಗಿ ಅಂದು ವ್ಯಾಪಾರ ಮಾಡಲು ಅನುಕೂಲವಾಗುವಂತೆ 54 ಪೇಟೆಗಳನ್ನು ಸ್ಥಾಪಿಸಿದರು ಎಂದರು.

ಸ್ವಯಂಕೃತ ಅಪರಾಧ: ಕುಡಿಯುವ ನೀರಿಗೆ ಅನೂ ಕೂಲವಾಗುವಂತೆ ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದರು, ಕೆರೆಕಟ್ಟೆ ಇದ್ದ ಜಾಗದಲ್ಲಿ ಬಸ್‌ನಿಲ್ದಾಣ, ಬೃಹತ್‌ಕಟ್ಟಡಗಳು ತಲೆಎತ್ತಿದ್ದು, ಇಂದು ಬೆಂಗಳೂರಿನಲ್ಲಿ ಕುಡಿಯುವ ಸಮಸ್ಯೆ ಎದುರಾಗಿದ್ದು, ಇದು ಪ್ರಕೃತಿ ನಿರ್ಮಿತ ಬರವಲ್ಲ. ಇದು ನಾವೇ ತಂದುಕೊಂಡ ಸ್ವಯಂಕೃತ ಅಪರಾಧ ಎಂದು ವಿಷಾದಿಸಿದರು.

Advertisement

ವಿಶ್ವದ ಗಮನ ಸೆಳೆದ ಬೆಂಗಳೂರು: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿ, ಕರ್ನಾಟಕದಲ್ಲಿ ಅನೇಕ ರಾಜಮಹಾ ರಾಜರು ಆಳಿಹೋಗಿದ್ದಾರೆ, ಆದರೆ ಅವರ ಪೈಕಿ ಮುಂದಿನ ದಿನಗಳಲ್ಲಿ ಯಾವರೀತಿ ಯೋಜನೆ ಹಾಕಿಕೊಳ್ಳಬೇಕು ಎಂಬುದನ್ನು 15 ನೇ ಶತಮಾನದಲ್ಲೇ ಕೆಂಪೇಗೌಡರು ಕಂಡುಕೊಂಡಿದ್ದರು. ಇದರ ಫಲವೇ ಬೆಂಗಳೂರು ನಗರ ಕರ್ನಾಟಕ ರಾಜಧಾನಿಯಾಗಿ ಜಗತ್ತಿನ ಗಮನಸೆಳೆಯುತ್ತಿದೆ ಎಂದರು.

ದೂರದೃಷ್ಟಿ ಹೊಂದಿದ್ದ ನಾಡಪ್ರಭು ಕೆಂಪೇಗೌಡ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಕೆಂಪೇಗೌಡರು ಪಾಳೇ ಗಾರರಾಗಿದ್ದು, ಅನೇಕ ಕೆರೆಕಟ್ಟೆ ಕಟ್ಟುವ ಮೂಲಕ ಮುಂಬರುವ ದಿನಗಳಲ್ಲಿ ಏನಾ ದರೂ ಬದಲಾವಣೆ ಯಾಗಬಹುದು ಎಂಬ ದೂರ ದೃಷ್ಟಿಕೋನ ಹೊಂದಿದ್ದರು. ಅದಕ್ಕೆ ಮುನ್ನುಡಿ ಯಾಗಿಯೇ ಅವರು ನಿರ್ಮಿಸಿದ ಬೆಂಗಳೂರು ನಗರ ವಿಶಾಲವಾಗಿ ಬೆಳೆದು, ಇಡೀ ಪ್ರಪಂಚದ ಗಮನಸೆಳೆ ಯುತ್ತಿದೆ, ನಗರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಪ್ರಸ್ತುತದಲ್ಲಿ ಸೂಕ್ತ ಎಂದರು.

ಸನ್ಮಾನ: ಅಂತಾರಾಷ್ಟ್ರೀಯ ಕಿಕ್‌ಬಾಕ್ಸಿಂಗ್‌ ಪಂದ್ಯದಲ್ಲಿ ಚಿನ್ನದಪದಕ ಪಡೆದ ಪಣ್ಯದಹುಂಡಿ ಗ್ರಾಮದ ಆರ್‌.ವಂಶಿ, ಪ್ರಸಕ್ತಸಾಲಿನ ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಎಸ್ಪಿ ಅನಿತಾ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಗೌಡ, ಜಿಪಂ ಸದಸ್ಯ ಸಿ.ಎನ್‌.ಬಾಲರಾಜು, ತಾಪಂ ಉಪಾಧ್ಯಕ್ಷ ಬಸವಣ್ಣ, ಸದಸ್ಯ ಮಹದೇವಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆ ಉಪನಿರ್ದೇಶಕ ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಿಬ್ಬಂದಿ, ನಾನಾಗ್ರಾಮಗಳ ಒಕ್ಕಲಿಗ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಮೆರವಣಿಗೆ: ಇದಕ್ಕೂ ಮೊದಲು ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು ನಗರದ ಚಾಮರಾಜೇಶ್ವರದೇವಸ್ಥಾನದ ಆವರಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಒಕ್ಕಲಿಗ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಡೊಳ್ಳುಕುಣಿತ, ಬ್ಯಾಂಡ್‌ಸೆಟ್ ಕಲಾತಂಡ ಗಳೊಂದಿಗೆ ಮೆರವಣಿಗೆ ಜೋಡಿರಸ್ತೆ ಮುಖಾಂತರ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಮಾವೇಶಗೊಂಡಿತು.

ಕಾರ್ಯಕ್ರಮಕ್ಕೂ ಮುನ್ನ ಜಾನಪದ ಗಾಯಕರಾದ ಅರುಣ್‌ಕುಮಾರ್‌ ಹಾಗೂ ಸಿ.ಎಂ.ನರಸಿಂಹಮೂರ್ತಿ ಭಾವಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next