Advertisement

ಕೇಜ್ರಿವಾಲ್‌ಗೆ ನನ್ನ ಕಂಡರೆ ಭಯ: ತೇಜೀಂದರ್‌ ಸಿಂಗ್‌ ಬಗ್ಗಾ

12:17 AM May 09, 2022 | Team Udayavani |

ಹೊಸದಿಲ್ಲಿ: ದಿಲ್ಲಿ ಬಿಜೆಪಿ ಘಟಕದ ವಕ್ತಾರ ತೇಜೀಂದರ್‌ ಸಿಂಗ್‌ ಬಗ್ಗಾರನ್ನು ಬಂಧಿಸದಂತೆ ಹರಿಯಾಣ ಮತ್ತು ಪಂಜಾಬ್‌ ಹೈಕೋರ್ಟ್‌ ತಾತ್ಕಾಲಿಕ ವಿಮೋಚನೆ ಕೊಟ್ಟಿದೆ.

Advertisement

ಇದೇ ವೇಳೆ, “ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ನನ್ನ ಕಂಡರೆ ಭಯ, ಅದಕ್ಕಾಗಿಯೇ ಅವರು ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ’ ಎಂದು ಬಗ್ಗಾ ದೂರಿದ್ದಾರೆ.

“ಕೇಜ್ರಿವಾಲ್‌ ಅವರು ಅವರನ್ನು ಡಾ| ಬಿ.ಆರ್‌.ಅಂಬೇಡ್ಕರ್‌ಗಿಂತ ದೊಡ್ಡವರು ಎಂದುಕೊಂಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ’ ಎಂದಿದ್ದಾರೆ.

ಬಗ್ಗಾ ಅವರ ತಂದೆ ಪ್ರೀತ್‌ಪಾಲ್‌ ಕೂಡ ಈ ಬಗ್ಗೆ ಮಾತನಾಡಿದ್ದು, “ಕೇಜ್ರಿವಾಲ್‌ಗೆ ನನ್ನ ಮಗನೆಂದರೆ ಭಯ. ಅದಕ್ಕಾಗಿ ಅವರು ಪಂಜಾಬ್‌ ಪೊಲೀಸರ ಮೂಲಕ ನನ್ನ ಕುಟುಂಬವನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ನಾವು ಸತ್ಯಕ್ಕಾಗಿ ಹೋರಾಡಲು ಸಿದ್ಧರಿದ್ದೇವೆ. ನನ್ನ ಮಗ ವಕೀಲರನ್ನು ಸಂಪರ್ಕಿಸುತ್ತಿದ್ದಾನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next