Advertisement

ನನ್ನ ಮಗನನ್ನೂ ಹೃದಯದಲ್ಲಿಟ್ಟುಕೊಳ್ಳಿ

05:34 PM Apr 09, 2019 | pallavi |
ಮಂಡ್ಯ: ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ
ಜಿಲ್ಲೆಯ ಜನರು ಹೃದಯದಲ್ಲಿ ಸ್ಥಾನ ನೀಡಿರುವ ರೀತಿಯಲ್ಲೇ ನನ್ನ ಮಗ ನಿಖೀಲ್‌ನನ್ನೂ ಹೃದಯದಲ್ಲಿಟ್ಟುಕೊಳ್ಳುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.
ಮಂಡ್ಯ ಲೋಕಸಭಾ ಚುನಾವಣೆಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಪರ ನಗರದ
27, 28, 32ನೇ ವಾರ್ಡ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ
ಕುಮಾರಸ್ವಾಮಿ ಅವರು 8,500 ಕೋಟಿ ರೂ. ಅನುದಾನ ನೀಡಿದ್ದಾರೆ. ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಕೈ ಬಲಪಡಿಸಲು ನಿಖೀಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ 8,500 ಕೋಟಿ ಅನುದಾನ ಕೊಟ್ಟ ಸಂದರ್ಭದಲ್ಲಿ ವಿರೋಧ ಪಕ್ಷದವರು ಮಂಡ್ಯ ಬಗ್ಗೆ ಟೀಕೆ ಮಾಡಿದರು. ಆದರೂ, ಅವರು ಟೀಕೆಗಳಿಗೆ ಹೆದರದೆ ಜಿಲ್ಲೆಯ ಅಭಿವೃದ್ಧಿಗೆ ತಮಗಿರುವ ಬದ್ಧತೆ ಪ್ರದರ್ಶಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳು ಆಗಲು ಸಹಕಾರ ನೀಡಿ, ಹೆಚ್ಚಿನ ಬಹುಮತದಿಂದ ನಿಖೀಲ್‌ ಆಯ್ಕೆ ಮಾಡಿ ಎಂದು ಕೋರಿದರು.
ಮಂಡ್ಯ ಲೋಕಸಭಾ ಚುನಾವಣೆಯ ವಿರೋಧ ಪಕ್ಷದ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಕೋಮುವಾದಿ ಪಕ್ಷವನ್ನು
ದೂರ ‌ವಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಮೈತ್ರಿ ಅಭ್ಯರ್ಥಿಗೆ ಜನರು ಮತ ನೀಡುವಂತೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಶಾಸಕ ಎಂ. ಶ್ರೀನಿವಾಸ್‌, ಮಾಜಿ ಶಾಸಕಿ ಪ್ರಭಾವತಿ ಜಯರಾಂ, ರಾಜ್ಯ ಅಲ್ಪಸಂಖ್ಯಾತರ ಅಭಿ  ವೃದ್ಧಿ ನಿಗಮದ ಅಧ್ಯಕ್ಷ ಜಫ್ರುÇÉಾ ಖಾನ್‌, ಕಾಂಗ್ರೆಸ್‌ ಮುಖಂಡರಾದ ಎಂ.ಎಸ್‌. ಆತ್ಮಾನಂದ, ಅಮರಾವತಿ ಚಂದ್ರಶೇಖರ್‌, ಎಚ್‌.ಕೆ.ರುದ್ರಪ್ಪ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಸ್‌.ಪಿ.ಗೌರೀಶ್‌, ಜಿಲ್ಲಾ ಧ್ಯಕ್ಷ ಡಿ.ರಮೇಶ್‌, ಕೀಲಾರ ರಾಧಾಕೃಷ್ಣ, ಡಾ.ಬಿ.ಶಿವಲಿಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು
Advertisement

Udayavani is now on Telegram. Click here to join our channel and stay updated with the latest news.

Next