Advertisement

Kedarnath ಹಗರಣ ತನಿಖೆಗೆ ಉತ್ತರಾಖಂಡ ಸರ್ಕಾರ ನಿರ್ಧಾರ

09:50 PM Jun 24, 2023 | Team Udayavani |

ಡೆಹ್ರಾಡೂನ್‌: ಕೇದರನಾಥ ದೇಗುಲದ ಗರ್ಭಗುಡಿಗೆ ಇತ್ತೀಚೆಗೆ ಚಿನ್ನದ ಲೇಪನ ಕಾರ್ಯ ನಡೆಯಿತು. ಈ ಕಾರ್ಯದಲ್ಲಿ 125 ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ಉನ್ನತಮಟ್ಟದ ಸಮಿತಿ ರಚಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

Advertisement

“ಈ ಪ್ರಕರಣದ ತನಿಖೆ ನಡೆಸಲು ಗರ್ವಾಲ್‌ ಕಮಿಷನರ್‌ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸುವಂತೆ ಸಂಸ್ಕೃತಿ ಮತ್ತು ಧಾರ್ಮಿಕ ಇಲಾಖೆ ಕಾರ್ಯದರ್ಶಿ ಹರಿಚಂದ್ರ ಅವರಿಗೆ ಆದೇಶಿಸಲಾಗಿದೆ. ಅಲ್ಲದೇ ಸಮಿತಿಯಲ್ಲಿ ತಾಂತ್ರಿಕ ತಜ್ಞರು ಮತ್ತು ಅಕ್ಕಸಾಲಿಗರನ್ನು ಸೇರಿಸುವಂತೆ ಸೂಚಿಸಲಾಗಿದೆ’ ಎಂದು ಉತ್ತರಾಖಂಡ ಧಾರ್ಮಿಕ ಮತ್ತು ಸಂಸ್ಕೃತಿ ಸಚಿವ ಸತ್ಪಾಲ್‌ ಮಹಾರಾಜ್‌ ತಿಳಿಸಿದ್ದಾರೆ.

“ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾನೂನು ಪ್ರಕಾರವೇ ದೇಣಿಗೆ ಪಡೆಯಲಾಗಿದೆ. ದೇಣಿಗೆದಾರರೊಬ್ಬರು ಚಿನ್ನ ತಂದು, ಅದನ್ನು ಗರ್ಭಗುಡಿಯ ಗೋಡೆಗಳಿಗೆ ಲೇಪನ ಮಾಡಿದ್ದಾರೆ. ಇದರಲ್ಲಿ ದೇಗುಲ ಸಮಿತಿಯ ನೇರ ಪಾಲ್ಗೊಳ್ಳುವಿಕೆ ಇಲ್ಲ. ಚಾರ್‌ಧಾಮ್‌ ಯಾತ್ರೆಗೆ ತೊಂದರೆ ನೀಡುವ ಪ್ರಯತ್ನವಾಗಿ ಪ್ರತಿಪಕ್ಷಗಳು ಸುಖಾಸುಮ್ಮನೆ ಆರೋಪಿಸುತ್ತಿವೆ,’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next