Advertisement

KEA Exam scam: ಸಿಐಡಿ ಬಂಧನಗಳೆಲ್ಲ ಅಕ್ರಮ ಎಂದ ಅರ್.ಡಿ.ಪಾಟೀಲ

05:29 PM Nov 17, 2023 | Team Udayavani |

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ಮಾಡುತ್ತಿರುವ ಬಂಧನಗಳೆಲ್ಲವೂ ಅಕ್ರಮ. ಅಮಾಯಕರನ್ನು ಒತ್ತಾಯಪೂರ್ವಕ ‌ಒಪ್ಪಿಸಿ ‌ಬಂಧಿಸಲಾಗುತ್ತಿದೆ ಎಂದು ಅಕ್ರಮದ ರೂವಾರಿ ಎನ್ನಲಾಗಿರುವ ಆರ್.ಡಿ.ಪಾಟೀಲ ಅಲಿಯಾಸ್ ರುದ್ರಗೌಡ ಪಾಟೀಲ ಅಸಮಾಧಾನ ಹೊರ ಹಾಕಿದ್ದಾನೆ.

Advertisement

ಸಿಐಡಿ‌ ಕಚೇರಿಯಲ್ಲಿ ಶುಕ್ರವಾರ ಅಪರಾಹ್ನ ವೈದ್ಯಕೀಯ ತಪಾಸಣೆಗಾಗಿ ಜಿಮ್ಸ್ ಗೆ ಹೋಗಿ ಬರುವಾಗ ಮಾಧ್ಯಮಕ್ಕೆ ಮುಖಾಮುಖಿಯಾದಾಗ ಸಿಟ್ಟು, ಅಸಮಾಧಾನ ಹೊರ ಹಾಕಿದ ಆತ, ತನಿಖೆಯ ನೆಪದಲ್ಲಿ ಕೆಲವು ಅಮಾಯಕರನ್ನು ಬಂಧಿಸಲಾಗುತ್ತಿದೆ. ಯಾವನೋ ರುದ್ರಗೌಡ ಎನ್ನುವ ಎಇಯನ್ನು ಬಂಧನ ಮಾಡಿರುವುದು ಕಾನೂನು ಬಾಹಿರ ಎಂದು ಹೇಳಿದ್ದಾರೆ.

ವಿಚಾರಣೆ ನೆಪದಲ್ಲಿ ಬಿಳಿಯ ಹಾಳೆಯ ಮೇಲೆ‌ ಸಹಿ‌ ಪಡೆದು ನೀವು ಅಕ್ರಮದಲ್ಲಿ ಪಾಲ್ಗೊಂಡಿದ್ದೀರಿ ಎಂದು ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾನೆ.

ಎಲ್ಲ ಬಂಧನಗಳು ಅಕ್ರಮವಾಗಿವೆ. ಹೆದರಿಸಿ ಎಫ್ಐಆರ್ ಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next