Advertisement

Telangana; ಕೆಸಿಆರ್‌ ಸರ್ಕಾರ ತೆಲಂಗಾಣದ ಅತೀ ಭ್ರಷ್ಟ ಸರ್ಕಾರ: ಪ್ರಧಾನಿ ಮೋದಿ ವಾಗ್ದಾಳಿ

05:36 PM Jul 08, 2023 | Team Udayavani |

ತೆಲಂಗಾಣ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಜು.08) ಚುನಾವಣಾ ಸನ್ನಿಹಿತ ತೆಲಂಗಾಣ ರಾಜ್ಯದಲ್ಲಿ 6,100 ಕೋಟಿ ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಇದನ್ನೂ ಓದಿ:Viral Video ; ಬರ್ತ್ ಡೇ ದಿನ ಮುದ್ದಾದ ಶ್ವಾನಗಳೊಂದಿಗೆ ಧೋನಿ ಸಂಭ್ರಮ

ಶಂಕುಸ್ಥಾಪನೆ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ್‌ ರಾಷ್ಟ್ರ ಸಮಿತಿ (BRS) ಸಮಿತಿ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕಲ್ವಾಕುಂಟ್ಲಾ ಚಂದ್ರಶೇಖರ್‌ ರಾವ್‌ (ಕೆಸಿಆರ್)‌ ಕೇವಲ ತಮ್ಮ ಕುಟುಂಬದ ಅಭಿವೃದ್ಧಿ ಮಾಡಿಕೊಂಡಿದ್ದಾರೆಯೇ ವಿನಃ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವುದಾಗಿ ಟೀಕಿಸಿದರು.  ಬಿಜೆಪಿ ಸರ್ಕಾರ ಮತ್ತು ಪ್ರಧಾನಿಯ ವಿರುದ್ಧ ಮಾತ್ರವೇ ಆರೋಪಿಸುವ ಕೆಸಿಆರ್‌ ಸರ್ಕಾರ ಅತೀ ಭ್ರಷ್ಟ ಸರ್ಕಾರವಾಗಿದೆ ಎಂದರು.

ತೆಲಂಗಾಣ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಇನ್ನೂ 15,000ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಹುದ್ದೆ ಖಾಲಿ ಉಳಿದಿದೆ. ವಂಶರಾಜಕಾರಣ ಮತ್ತು ಭ್ರಷ್ಟಾಚಾರದ ಕುರಿತು ತೆಲಂಗಾಣದ ಜನತೆಗೆ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ ಪ್ರಧಾನಿ ಮೋದಿ, ಬಿಆರ್‌ ಎಸ್‌ ಮತ್ತುಕಾಂಗ್ರೆಸ್‌ ಪಕ್ಷದ ಬಗ್ಗೆ ಜಾಗೃತೆ ವಹಿಸುವಂತೆ ತಿಳಿಸಿದರು.

Advertisement

ಎಲ್ಲಾ ವಂಶಪಾರಂಪರ್ಯ ಪ್ರೇರಿತ ರಾಜಕೀಯ ಪಕ್ಷಗಳು ದೇಶದಲ್ಲಿ ಭ್ರಷ್ಟಾಚಾರಕ್ಕೆ ಅಡಿಪಾಯ ಹಾಕಿವೆ ಎಂಬುದನ್ನು ತೆಲಂಗಾಣದ ಜನರು ಅರಿತುಕೊಳ್ಳಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next