Advertisement

ಸಂಬಂಧಿಕರ ಮನೆಯಲ್ಲಿ ಕೆಸಿಎನ್‌ ಪ್ರತ್ಯಕ್ಷ

01:54 AM Feb 10, 2019 | |

ಮಂಡ್ಯ: ಅನಾರೋಗ್ಯದ ನೆಪವೊಡ್ಡಿ ಅಧಿವೇಶನಕ್ಕೆ ಗೈರು ಹಾಜರಾಗಿರುವ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣ ಗೌಡ ಅವರು ಜೆಡಿಎಸ್‌ ನಾಯಕರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿ ದ್ದಾರೆ. ಚಳಿ ಜ್ವರ ಬಂದವರಂತೆ ನಾಟಕವಾಡುತ್ತಾ, ಮುಂಬೈ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ, ವಿಡಿಯೋಗಳನ್ನು ಹರಿಯ ಬಿಟ್ಟು, ಶಾಸಕರು, ಶನಿವಾರ ಮಂಡ್ಯದಲ್ಲಿ ದಿಢೀರನೆ ಪ್ರತ್ಯಕ್ಷರಾದರು.

Advertisement

ಮಂಡ್ಯದ ಹೊಸಹಳ್ಳಿ ಬಡಾವಣೆಯಲ್ಲಿರುವ ತಮ್ಮ ತಾಯಿ ಸಂಬಂಧಿಕ ಹೊಸಹಳ್ಳಿ ನಾಗೇಶ್‌ ಅವರ ಮನೆಯಲ್ಲಿ ನಡೆದ ಸತ್ಯನಾರಾ ಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಬಜೆಟ್ ಮಂಡನೆ ಮಾಡುವ ದಿನ ನಾನು ಸದನದಲ್ಲಿ ಹಾಜರಿರುತ್ತೇನೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ನಾಯಕರಿಗೆ ಭರವಸೆ ನೀಡಿದ್ದವರು ಶುಕ್ರವಾರ ಸದನಕ್ಕೆ ಗೈರಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಯಾರ ಕೈಗೂ ಸಿಗದೆ ಆಟವಾಡುತ್ತಿದ್ದ ನಾರಾಯಣಗೌಡರು, ಮಂಡ್ಯದಲ್ಲಿ ಪ್ರತ್ಯಕ್ಷರಾಗಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next