Advertisement

JDU ರಾಷ್ಟ್ರೀಯ ವಕ್ತಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಕೆ.ಸಿ.ತ್ಯಾಗಿ:ಡ್ಯಾಮೇಜ್ ಕಂಟ್ರೋಲ್?

07:01 PM Sep 01, 2024 | Team Udayavani |

ಹೊಸದಿಲ್ಲಿ: ಜೆಡಿಯು(JDU) ನಾಯಕ ಕೆ.ಸಿ.ತ್ಯಾಗಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತತ್ ಕ್ಷಣವೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತ್ಯಾಗಿ ಅವರ ಸ್ಥಾನಕ್ಕೆ ರಾಜೀವ್ ರಂಜನ್ ಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ.

Advertisement

ವೈಯಕ್ತಿಕ ಕಾರಣಗಳಿಗಾಗಿ ತ್ಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಪಕ್ಷವು ಹೇಳಿದ್ದರೂ, ಪ್ರಮುಖ ವಿಷಯಗಳ ಕುರಿತು ತ್ಯಾಗಿ ಅವರ ಹೇಳಿಕೆಗಳು ಮಿತ್ರ ಪಕ್ಷ ಬಿಜೆಪಿ(BJP) ನಾಯಕತ್ವದೊಂದಿಗೆ ಸರಿಹೋಗದ ನಂತರ ಈ ಬೆಳವಣಿಗೆಯನ್ನು ಜೆಡಿಯುನ ಡ್ಯಾಮೇಜ್ ಕಂಟ್ರೋಲ್ ಎಂದು ಹೇಳಲಾಗುತ್ತಿದೆ.

”ನಾನು ಇನ್ನೂ ಪಕ್ಷದಲ್ಲಿದ್ದೇನೆ, ನಾನು ಪಕ್ಷದ ರಾಜಕೀಯ ಸಲಹೆಗಾರ, ನಿತೀಶ್ ಕುಮಾರ್ ಅವರೊಂದಿಗೆ ನನಗೆ ರಾಜಕೀಯ ಬದ್ಧತೆ ಇದೆ, ನಾನು ಅಸಮಾಧಾನಗೊಂಡಿಲ್ಲ, ನಿರಾಶೆಗೊಂಡಿಲ್ಲ, ನಾನು ಉಲ್ಲಾಸದಿಂದಿದ್ದೇನೆ, ನಾನು ಪಕ್ಷದ ವಕ್ತಾರ ಹುದ್ದೆಗೆ ರಾಜೀನಾಮೆ ನೀಡಿದ್ದೇನಷ್ಟೇ ” ಎಂದು ತ್ಯಾಗಿ ಹೇಳಿಕೆ ನೀಡಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ, ಏಕರೂಪ ನಾಗರಿಕ ಸಂಹಿತೆ ಮತ್ತು ಇತ್ತೀಚೆಗೆ ಗಾಜಾದಲ್ಲಿನ ಯುದ್ಧದಂತಹ ಪ್ರಮುಖ ವಿಷಯಗಳ ಕುರಿತು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ನೀಡಿದ ತ್ಯಾಗಿ ಅವರ ಹೇಳಿಕೆಗಳು ಬಿಜೆಪಿಯವರ ಕಣ್ಣು ಕೆಂಪಾಗುವಂತೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next