Advertisement

Kayartadka: ಕಳೆ ಕೀಳುವಾಗ ಕಬ್ಬಿಣದ ರಿಂಗ್‌ ಎದೆಗೆ ಬಿದು ವ್ಯಕ್ತಿ ಸಾವು

08:42 PM Sep 17, 2024 | Team Udayavani |

ಬೆಳ್ತಂಗಡಿ: ಕಳೆ ಯಂತ್ರದ ಮೂಲಕ ರಬ್ಬರ್‌ ತೋಟದ ಕಳೆ ಕೀಳುತ್ತಿರುವ ಸಂದರ್ಭ ರಬ್ಬರ್‌ ಮರಕ್ಕೆ ಕಪ್‌ ಸಿಲುಕಿಸುವ ರಿಂಗ್‌ ಎದೆಗೆ ಬಡಿದು ಗಂಭೀರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಘಟನೆ ಮಂಗಳವಾರ (ಸೆ. 17) ಬೈದಿಕಜೆ ಎನ್ನುವಲ್ಲಿ ನಡೆದಿದೆ.

Advertisement

ಕಾಯರ್ತಡ್ಕ ಹಾರಿತ್ತಕಜೆ ನಿವಾಸಿ ಕೊರಗಪ್ಪ ಗೌಡ (56) ಅವರು ಮೃತಪಟ್ಟ ವ್ಯಕ್ತಿ.

ಇವರು ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್‌ ವೇಗವಾಗಿ ಎದೆಗೆ ಬಡಿದು ಆಳವಾದ ಗಾಯವಾಗಿತ್ತು. ತತ್‌ಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಸ್ಥಳೀಯರು ಮಾಡಿದರೂ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next