Advertisement

ದೋಟಿಹಾಳ ಆರೋಗ್ಯಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ

03:04 PM Nov 09, 2019 | Suhan S |

ದೋಟಿಹಾಳ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2018-19ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ಲಭಿಸಿದೆ. ಶುಚಿತ್ವ, ನೈರ್ಮಲ್ಯ, ಸೂಕ್ತ ಸೌಲಭ್ಯ ಹೊಂದಿರುವ ಜಿಲ್ಲೆಯ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.

Advertisement

ಹೀಗಾಗಿ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2018-19ನೇ “ಕಾಯಕಲ್ಪ ಪ್ರಶಸ್ತಿ’ ದೊರೆತಿದೆ. ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು, ಇಲಾಖೆಯ ಆಯುಕ್ತ ಡಾ| ಪಂಕಜಕುಮಾರ ಪಾಂಡೆ, ಜಾವೀದ್‌ ಅಕ್ತರ್‌ ಅವರು ದೋಟಿಹಾಳ ಆರೋಗ್ಯ ಕೇಂದ್ರದ ಡಾ| ಎ.ಬಿ. ಮೇಟಿಪಾಟೀಲ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಡಾ| ಎ.ಬಿ. ಮೇಟಿಪಾಟೀಲ್‌ ಅವರು ಮಾತನಾಡಿ, ಆರೋಗ್ಯ ಸೌಲಭ್ಯಗಳು, ಸ್ವತ್ಛತೆ, ಸುಚಿತ್ವ ಮತ್ತು ಉತ್ತಮ ಸೇವೆ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಿಗುವ ಕಾಯಕಲ್ಪ ಪ್ರಶಸ್ತಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ, ಮೇಲಾಧಿಕಾರಿ ಮಾರ್ಗದರ್ಶನ ಹಾಗೂ ಸಾರ್ವಜನಿಕರ ಸಹಕಾರದಿಂದ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next