Advertisement

ಬೈಕಿಗೆ ವಾಹನ ಢಿಕ್ಕಿ: ಯುವ ಕವಾಡ್‌ ಯಾತ್ರಿಕನ ಸಾವು

10:42 AM Aug 04, 2018 | udayavani editorial |

ಮುಜಫ‌ರನಗರ : ಜಿಲ್ಲೆಯ ದಿಲ್ಲಿ – ಹರಿದ್ವಾರ ಹೈವೇಯಲ್ಲಿ ವಾಹನವೊಂದು ಬೈಕ್‌ ಮೇಲೆ ಹರಿದ ಪರಿಣಾಮವಾಗಿ ಬೈಕ್‌ ಸವಾರ, ಕವಾಡ್‌ ಯಾತ್ರಿಕ, ಮೃತಪಟ್ಟ ಘಟನೆ ವರದಿಯಾಗಿದೆ.

Advertisement

26ರ ಹರೆಯದ ಬೈಕ್‌ ಸವಾರ ನಿತೀಶ್‌ ಶರ್ಮಾ ಅವರು ಹರಿದ್ವಾರಕ್ಕೆ ಹೋಗುತ್ತಿದ್ದಾಗ ವಾಹನವೊಂದು ಅವರ ಬೈಕ್‌ ಮೇಲೆಯೇ ಹರಿಯಿತು. 

ತೀವ್ರ ಗಾಯಗೊಂಡ ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿನ ವೈದ್ಯರು ನಿತೀಶ್‌ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next