Advertisement

ಕಾವ್ಯಾ ಸಾವು: ಶಿರ್ವ ಸಂತ ಮೇರಿ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

07:55 AM Aug 04, 2017 | Harsha Rao |

ಶಿರ್ವ: ಮೂಡಬಿದ್ರೆ ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿನಿ ರಾಷ್ಟ್ರೀಯ ಕ್ರೀಡಾಪಟು ಕಾವ್ಯಾಳ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಕಾಲೇಜಿನಿಂದ ಶಿರ್ವ ಬಸ್ಸು ನಿಲ್ಕಾಣಕ್ಕೆ ಸಾಗಿಬಂದ ವಿದ್ಯಾರ್ಥಿಗಳ ಪರವಾಗಿ ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಕ್ರಿಸ್ಟನ್‌ ಅಲೇ¾ಡಾ ಮಾತನಾಡಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಅಸಹಜ ಸಾವಿನ ಹಿಂದೆ ಹಲವಾರು ಅನುಮಾನ, ಸಂಶಯಗಳಿವೆ. ನೇಣು ಹಾಕಿಕೊಂಡ ಶವವನ್ನು ಸಹಪಾಠಿಗಳಾದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಕೆಳಗಿಳಿಸಿದ್ದು, ಹೆತ್ತವರು ಬರುವ ಮೊದಲೇ ಶವವನ್ನು ಶವಾಗಾರಕ್ಕೆ ಸಾಗಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.  ನಮ್ಮ ಪ್ರತಿಭಟನೆ ಯಾರ ವಿರುದ್ಧವೂ ಅಲ್ಲ ಬದಲಾಗಿ ಪೋಲೀಸರು ಹಾಗೂ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಪರವಾಗಿ ತೃತೀಯ ಬಿ.ಕಾಂ.ನ ವಿದ್ಯಾರ್ಥಿ ಶಿವಕುಮಾರ್‌ ಮಾತನಾಡಿ, ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿನಿಯ ಸಾವಿನ ಹಿಂದೆ ಅನ್ಯಾಯ ನಡೆದಿದ್ದು, ಇಂದು ಈ ಅನ್ಯಾಯ ಅಳ್ವಾಸ್‌ ಸಂಸ್ಥೆಯಲ್ಲಿ ನಡೆದಿದೆ, ನಾಳೆ ನಮ್ಮ ಮನೆಯ ಮಕ್ಕಳಿಗೂ ನಡೆಯಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಆದ್ದರಿಂದ ಪರಿಸರದ ಎಲ್ಲ ಸಂಘ ಸಂಸ್ಥೆಗಳು ಎಚ್ಚೆತ್ತುಕೊಂಡು ನಮ್ಮೊಂದಿಗೆ ಕೈಜೋಡಿಸಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ ಎಂದು ಹೇಳಿದರು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್‌ ಶೆಣೈ, ಕಾರ್ಯದರ್ಶಿ ಹನುಮಂತ ಜೆ.ಕೆ., ಜತೆ ಕಾರ್ಯದರ್ಶಿ ಅನ್ಸಿಟಾ ಒಶಿನ್‌ ಡಿ’ಸೋಜಾ, ಕ್ರೀಡಾ ಕಾರ್ಯದರ್ಶಿ ಸ್ವಾತಿ , ಶ್ರೇಯಾ ಆಚಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next