Advertisement
ಉದ್ಯಮಿ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಚದುರಂಗ ಭಾರತೀಯ ಕ್ರೀಡೆಯಾಗಿದ್ದು ಆಟಗಾರರ ಮೆದು ಳನ್ನು ಜಾಗೃತಿಗೊಳಿಸುವ ಮತ್ತು ಬುದ್ದಿ ಮತ್ತೆಯನ್ನು ಹೆಚ್ಚಿಸುವ ಕ್ರೀಡೆಯಾಗಿದೆ. ಚದುರಂಗದಲ್ಲಿ ಹಲವು ಮಂದಿ ಭಾರತೀಯರು ವಿಶ್ವವನ್ನು ಆಳುವ ಸಾಧನೆ ಮಾಡಿದ್ದು, ಕಾಪುವಿನಂತಹ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಪಂದ್ಯಾಟವನ್ನು ಆಯೋಜಿಸುವ ಮೂಲಕ ರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಸೃಷ್ಟಿಸುವ ಪ್ರಯತ್ನ ನಡೆ ದಿರುವುದು ಶ್ಲಾಘನೀಯವಾಗಿದೆ ಎಂದರು.
ಸಂಸ್ಥೆಯ ಸ್ಥಾಪಕ ಫಿಡೆ ಆರ್ಬಿಟರ್ ಮತ್ತು ಕೋಚ್ ಸಾಕ್ಷಾತ್ ಯು.ಕೆ. ಸ್ವಾಗತಿಸಿದರು. ನಿರ್ದೇಶಕಿ ಸೌಂದರ್ಯ ಯು. ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Related Articles
ಈ ಚೆಸ್ ಸ್ಪರ್ಧೆಯಲ್ಲಿ ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ದಿಲ್ಲಿ, ಪಶ್ಚಿಮ ಬಂಗಾಲ ಸಹಿತ ವಿವಿಧ ರಾಜ್ಯಗಳ 442 ಸ್ಪರ್ಧಿಗಳು ಭಾಗವವಹಿಸಿದ್ದರು.
Advertisement