Advertisement

ಪ್ರೇಯಸಿಗೆ ಸಮಾಧಿ ಕಟ್ಟಿದವ, ಹೆತ್ತವರನ್ನು ಸುಟ್ಟು ಬೂದಿ ಮಾಡಿದ್ದ!

03:45 AM Feb 05, 2017 | |

ಭೋಪಾಲ್‌:  ಫೇಸ್‌ಬುಕ್‌ನಲ್ಲಿ ಪ್ರೇಮಿಸಿ, ಲಿವ್‌ಇನ್‌ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು ಸಮಾಧಿ ಕಟ್ಟಿದ್ದ ಉದಯನ್‌ ದಾಸ್‌ ಈಗ ಭಸ್ಮಾಸುರ ಎಂಬುದೂ ತಿಳಿದುಬಂದಿದೆ! ಆರು ವರ್ಷದ ಹಿಂದೆಯೇ ಈತ ತನ್ನ ತಂದೆ- ತಾಯಿಯನ್ನು ಕೊಂದು ರಾಯ್‌ಪುರದ ತನ್ನ ಮನೆಯಲ್ಲಿ ಭಸ್ಮ ಮಾಡಿದ್ದ!

Advertisement

ಪಶ್ಚಿಮ ಬಂಗಾಳದ ಮೂಲದ ಪ್ರೇಯಸಿ ಆಕಾಂಕ್ಷಾಳ ಕತ್ತು ಹಿಸುಕಿ, ಭೋಪಾಲ್‌ನ ಮೊದಲನೇ ಮಹಡಿಯ ಮನೆಯಲ್ಲಿ ಸಮಾಧಿ ಮಾಡಿದ್ದ ಉದಯನ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಈ ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬಿದ್ದವು. 2010-11ರಲ್ಲಿ ಈತ ತಂದೆ-ತಾಯಿಯನ್ನು ಕೊಂದು ಮನೆಯ ಕಾಂಪೌಂಡ್‌ ಒಳಗೆ ಸುಟ್ಟು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

“ಮೊದಲ ವಿಚಾರಣೆಯಲ್ಲಿ ತಂದೆ ಪಿಕೆ ದಾಸ್‌ ಕಾರ್ಖಾನೆ ನಡೆಸುತ್ತಿದ್ದರು. 2010ರಲ್ಲಿ ರಾಯ್‌ಪುರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರು ಎಂದು ಹೇಳಿದ್ದ. ಬಳಿಕ ತನ್ನ ತಂದೆ- ತಾಯಿಯನ್ನು ಕಾಂಪೌಂಡ್‌ ಒಳಗೆ ಸುಟ್ಟಿದ್ದೇನೆ ಎನ್ನುತ್ತಿದ್ದಾನೆ. ಉದಯ್‌ ಚಾಣಾಕ್ಷನಾಗಿದ್ದು, ತನ್ನ ಇಂಗ್ಲಿಷ್‌ನಿಂದ ಯಾರನ್ನಾದರೂ ಓಲೈಸಿಕೊಳ್ಳುವಂಥವನು. ಈತನ ಹೇಳಿಕೆ ಆಧರಿಸಿ ರಾಯ್‌ಪುರಕ್ಕೆ ಪೊಲೀಸ್‌ ತಂಡವನ್ನು ಕಳುಹಿಸಿಕೊಡಲಾಗಿದೆ’ ಎಂದು ಭೋಪಾಲ್‌ನ ಗೋವಿಂದಪುರ ಸಿಎಸ್ಪಿ ವಿರೇಂದ್ರ ಮಿಶ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next