Advertisement

Ullal ಕುತ್ತಾರು: ಬೇಕರಿ ಮಾಲಕ ಆತ್ಮಹತ್ಯೆ

12:33 AM Aug 22, 2023 | Team Udayavani |

ಉಳ್ಳಾಲ: ಕುತ್ತಾರು ಮತ್ತು ದೇರಳಕಟ್ಟೆ ಯೇನೆಪೊಯ ಬಳಿ ಎರಡು ಬೆಂಗಳೂರು ಐಯ್ಯಂಗಾರ್‌ ಬೇಕರಿ ಮಾಲಕ ಹಾಸನ ಜಿಲ್ಲೆ ಹಳೇಬೀಡು ರಸ್ತೆಯ ಬಲ್ಲೇನಹಳ್ಳಿ ನಿವಾಸಿ ರುದ್ರೇಶ್‌ (36) ಮುಂಡೋಳಿ ಬಳಿಯ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದ ಘಟನೆ ಸೋಮವಾರ ಸಂಜೆ ವೇಳೆಗೆ ನಡೆದಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಹಾಸನದಿಂದ 12 ವರ್ಷಗಳ ಹಿಂದೆ ಮುಂಡೋಳಿಗೆ ಬಂದಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next