Advertisement

ಕಾತ್ರಜ್‌:ತಾಳಮದ್ದಳೆ ರೂಪದಲ್ಲಿ  ಶನಿ ಗ್ರಂಥ ಪಾರಾಯಣ

04:59 PM Dec 12, 2017 | |

ಪುಣೆ: ಕಾತ್ರಜ್‌ನ ಸಚ್ಚಾಯಿ ಮಾತಾ ನಗರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ದಿನದ ಕಾರ್ಯಕ್ರಮವಾಗಿ  ಡಿ. 9ರಂದು ಫೋರ್ಟ್‌ ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮ ಪೂಜಾ  ಸಮಿತಿಯ ಜೆ. ಜೆ. ಕೋಟ್ಯಾನ್‌ ಮತ್ತು ತಂಡದವರಿಂದ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಶ್ರೀ ಶನಿಗ್ರಂಥ ಪಾರಾಯಣವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.

Advertisement

ಮಂದಿರದ ಪ್ರದಾನ ಅರ್ಚಕರಾದ ಹರೀಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಶ್ರೀ  ಅಯ್ಯಪ್ಪ ಸ್ವಾಮೀ ದೇವರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ ನೆರವೇರಿತು. ಅನಂತರ ಮಂದಿರದ ಗುರುಸ್ವಾಮಿಗಳಾದ, ಪ್ರಭಾಕರ ಗುರು ಸ್ವಾಮಿಗಳ ನೇತೃತ್ವದಲ್ಲಿ ಪಡಿ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು.

ಹೆಚ್ಚಿನ ಸಂಖ್ಯೆಯ ಅಯ್ಯಪ್ಪ ಮಾಲಾಧಾರಿಗಳು,  ಭಕ್ತರು, ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ದೇವರ  ಗಂಧ ಪ್ರಸಾದ ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ  ಕೃಪೆಗೆ ಪಾತ್ರರಾದರು. ಪ್ರಸಾದ ವಿತರಣೆಯ ಅನಂತರ ಅನ್ನದಾನ ನೆರವೇರಿತು.  ಕಾತ್ರಜ್‌ ಅಯ್ಯಪ್ಪ ಮಂದಿರದ ವಿಶ್ವಸ್ತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗದ ಸದಸ್ಯೆಯರ ಸಹಕಾರದೊಂದಿಗೆ ಕಾರ್ಯಕ್ರಮ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next