Advertisement
ಭಾರತದ ಭೂಪ್ರದೇಶವನ್ನೊಳಗೊಂಡ ನೇಪಾಳದ ವಿವಾದಿತ ನಕ್ಷೆಗೆ ಕಾನೂನಾತ್ಮಕ ಸ್ಥಾನಮಾನ ನೀಡಲು ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜೂ.9 ರಂದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅಲ್ಲಿನ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
Related Articles
Advertisement
ಭಾರತದ ಜತೆ ಮಾತುಕತೆ: ನೇಪಾಲವು ಭಾರತದೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದಲ್ಲಿ ವಿಡಿಯೊ ಕಾನ್ಫರೆನ್ಸ್ ನಡೆಸಿದೆ ಎಂದೂ ವರದಿಯಾಗಿದೆ. ತನ್ನ ಹೊಸ ನಕ್ಷೆಯನ್ನು ಭಾರತ ಕಡೇ ಕ್ಷಣದಲ್ಲಾದರೂ ಒಪ್ಪುತ್ತದೆಂಬ ಹುಸಿ ಭರವಸೆ ನೇಪಾಲದ್ದು. ಒಂದು ವೇಳೆ ಭಾರತ ಒಪ್ಪಿದರೆ, ಜೂ.9ರಂದು ಎರಡನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಓಲಿ ಸರಕಾರಕ್ಕೆ ಇನ್ನಷ್ಟು ಸುಲಭವಾಗುತ್ತದೆ.
ಆದರೆ, ಓಲಿ ಸರಕಾರದ ಈ ನಡೆಯನ್ನು ಭಾರತ ಒಪ್ಪುವುದಿಲ್ಲ ಎನ್ನುವುದು ಇಲ್ಲಿನ ನೇಪಾಲದ ಉನ್ನತಾಧಿಕಾರಿಗಳಿಗೆ ಸ್ಪಷ್ಟವಾಗಿದೆ. ನೆರೆ ರಾಷ್ಟ್ರದೊಂದಿಗೆ ಕನಿಷ್ಠ ಮಾತುಕತೆಯನ್ನೂ ನಡೆಸದೆ ನೇಪಾಳ ಏಕಪಕ್ಷೀಯವಾಗಿ ತೀರ್ಮಾನಿಸಿದೆ. ಇದು ನಕ್ಷೆ ವಿವಾದವನ್ನು ಇನ್ನಷ್ಟು ಜಟಿಲ ಹಂತಕ್ಕೆ ಒಯ್ಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.