ಕಟಪಾಡಿ: ಅಭಿವೃದ್ಧಿ ಕಾಮಗಾರಿಗಾಗಿ ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿನ ನಿತ್ಯಾನಂದ ಸಭಾಭವನದ ಬಳಿಯಲ್ಲಿ ಇದ್ದ ಹಳೆಯದಾದ ಸೇತುವೆಯೊಂದನ್ನು ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿಯ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಸುರಕ್ಷತಾ ಕ್ರಮ ಹೆಚ್ಚಳಗೊಂಡಿದೆ.
ಈ ಭಾಗದಲ್ಲಿ ಸೂಕ್ತವಾದ ಮತ್ತು ಸಮರ್ಪಕವಾದ ಸುರಕ್ಷತಾ ಕ್ರಮಗಳಿಲ್ಲದೆ ಸಂಚಾರಿಗಳು ಗೊಂದಲಕ್ಕೀಡಾಗುತ್ತಿದ್ದರು. ಅಪಾಯದ ಭೀತಿಯ ಬಗ್ಗೆ ಸಾರ್ವಜನಿಕರು ಅಸಹನೆ ವ್ಯಕ್ತಪಡಿಸುತ್ತಿದ್ದರು.
ಬುಧವಾರ ರಾತ್ರಿಯಲ್ಲಿ ಸವಾರನೋರ್ವ ಬಿದ್ದು ಗಾಯಗೊಂಡಿದ್ದು ಇದೀಗ ಹೆಚ್ಚಿನ ಸುರಕ್ಷತೆಗೆ ಗಮನ ಹರಿಸಿದ್ದು, ಮಂಗಳೂರು ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕಲ್ಲಾಪು ಬಳಿ ಒಳ ಪ್ರವೇಶಿಸುವಲ್ಲಿಯೂ ಬ್ಯಾರಿಕೇಡ್, ಟೇಪ್ ಅಳವಡಿಸಿದ್ದು,
ಕಟಪಾಡಿ ಒಳ ಭಾಗದಿಂದ ಸಂಚರಿಸುವ ಭಾಗದಲ್ಲಿಯೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.