Advertisement

ಕಟಪಾಡಿ :ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯೆ ಡಿವೈಡರ್ ಏರಿದ ಕಾರು ;ಪ್ರಯಾಣಿಕರು ಪಾರು

05:21 PM Aug 14, 2021 | Team Udayavani |

ಕಾಪು  : ರಾ.ಹೆ. 66 ರಲ್ಲಿ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದ ಸ್ಟ್ರೀಟ್ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದು, ಡಿವೈಡರ್ ಮೇಲೇರಿ ನಿಂತ ಘಟನೆ ಶನಿವಾರ ಮಧ್ಯಾಹ್ನ ಕಟಪಾಡಿಯಲ್ಲಿ ನಡೆದಿದೆ.

Advertisement

ಮಂಗಳೂರು ನೋಂದಾವಣೆಯ ಕಾರಿನಲ್ಲಿದ್ದವರು ಉಡುಪಿಗೆ ಆಗಮಿಸಿ, ಉಡುಪಿಯಿಂದ ಮಂಗಳೂರಿಗೆ ಮರಳುತ್ತಿದ್ದ ವೇಳೆ ಮಳೆಯ ಕಾರಣ ಅಪಘಾತ ಸಂಭವಿಸಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ ನಾಲ್ಕು ಮಂದಿ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಟಪಾಡಿ ಹೊರಠಾಣಾ ಎಎಸ್‌ಐ ದಯಾನಂದ್ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿದ್ದು ಸ್ಥಳೀಯರ ಸಹಕಾರದೊಂದಿಗೆ ಅಪಘಾತಕ್ಕೊಳಗಾದ ಕಾರನ್ನು ತೆರವುಗೊಳಿಸಲಾಯಿತು.

ಇದನ್ನೂ ಓದಿ :ಮೊಬೈಲ್‌ ಶೋರೂಂನಲ್ಲಿ ಕಳವು ಪ್ರಕರಣ : 40 ಲ.ರೂ. ಮೌಲ್ಯದ ಮೊಬೈಲ್‌ಗ‌ಳ ಸಹಿತ ಓರ್ವನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next