Advertisement

ಕಸ್ತೂರಿರಂಗನ್‌ ವರದಿ-ಬಿಜೆಪಿ ಸಂಸದರೇಕೆ ಮೌನ: ಐವನ್‌ 

01:21 PM Mar 09, 2017 | |

ಮಂಗಳೂರು: ರಾಜ್ಯದ ವರದಿಯನ್ನು ಪರಿಗಣಿಸದೆ ಪಶ್ಚಿಮ ಘಟ್ಟದ ಹಳ್ಳಿಗಳ ಮೇಲೆ ತೂಗುಗತ್ತಿಯಾಗಿರುವ ಕಸ್ತೂರಿರಂಗನ್‌ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮುಂದಾಗಿರುವುದು ಖಂಡನೀಯ ಹಾಗೂ ರಾಜ್ಯದ ಜನರಿಗೆ ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೂ ಈ ಭಾಗದ ಬಿಜೆಪಿ ಸಂಸದರು ಮೌನ ವಹಿಸಿದ್ದು ಯಾಕೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಪ್ರಶ್ನಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ವಿರೋಧವನ್ನು ಕೇಂದ್ರ ಸರಕಾರ ಒಪ್ಪಿಕೊಂಡು ಅಲ್ಲಿಗೆ ವಿನಾಯಿತಿ ನೀಡಿದೆ. ಆದರೆ ಕರ್ನಾಟಕದ ವಾದವನ್ನೇ ಆಲಿಸಲಿಲ್ಲ. ಯಾವುದೇ ಕಾರಣಕ್ಕೂ ಕಸ್ತೂರಿರಂಗನ್‌ ವರದಿ ಜಾರಿ ಮಾಡುವುದಿಲ್ಲ ಎಂದು ಯಡಿಯೂರಪ್ಪ ಅವರು ಒಂದು ಕಡೆ ಹೇಳುತ್ತಲೇ ಇದ್ದಾರೆ. ಕೇಂದ್ರ ಸರಕಾರ ಮಾತ್ರ ಇದನ್ನು ಆಲಿಸುತ್ತಿಲ್ಲ. ವಿಶೇಷವೆಂದರೆ ದ.ಕ. ಉಡುಪಿ ಭಾಗದ ಬಿಜೆಪಿ ಸಂಸದರು ಯಾವುದೇ ಹೋರಾಟದ ಮಾತೆತ್ತುತ್ತಿಲ್ಲ. ಡಿ.ವಿ. ಸದಾನಂದ ಗೌಡರು ಚಕಾರವೆತ್ತಿಲ್ಲ ಎಂದರು. 

ಕಾರ್ಪೊರೇಟರ್‌ ಅಶೋಕ್‌ ಡಿ.ಕೆ.,  ಮನುರಾಜ್‌, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next