Advertisement

Kashmir ಮೇಘಸ್ಫೋಟ: ರಾಷ್ಟ್ರೀಯ ಹೆದ್ದಾರಿಯೇ ಬಂದ್‌!

12:44 AM Aug 05, 2024 | Team Udayavani |

ಶ್ರೀನಗರ/ನಾಶಿಕ್‌: ಜಮ್ಮು -ಕಾಶ್ಮೀರದ ಗಂದೇರ್‌ಬಾಲ್‌ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಮೇಘ ಸ್ಫೋಟ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡಿದೆ.

Advertisement

ಹಲವೆಡೆ ಭೂಕುಸಿತ ಉಂಟಾಗಿದ್ದು, ಅನೇಕ ಮನೆಗಳು, ರಸ್ತೆಗಳಿಗೆ ಹಾನಿಯಾಗಿವೆ. ಶ್ರೀನಗರ- ಲೇಹ್‌ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾದ ಕಾರಣ, ಹೆದ್ದಾರಿಯನ್ನೇ ಮುಚ್ಚಲಾಗಿದೆ. ಇನ್ನು, ಹಿಮಾಚಲ ಮೇಘ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿಕೆ ಆಗಿದ್ದು, ನಾಪತ್ತೆಯಾಗಿರುವ 40 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕೇದಾರನಾಥದ ಮಾರ್ಗದಲ್ಲಿ ಸಿಲುಕಿದ್ದ ಯಾತ್ರಿಕರನ್ನು ರಕ್ಷಿಸುವ ಕಾರ್ಯ 4ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯದಲ್ಲೇ 373 ಮಂದಿಯನ್ನು ಲಿಂಚೋಲಿಯಿಂದ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಮಧ್ಯಪ್ರದೇಶದ ಬೆಟ್ಟದ ಮೇಲಿನ ದೇಗುಲದಲ್ಲಿ ಸಿಲುಕಿದ್ದ 8 ಮಂದಿಯನ್ನು ರಕ್ಷಿಸಲಾಗಿದೆ.

ಗೋದಾವರಿ ತೀರದಲ್ಲಿ ಪ್ರವಾಹ ಭೀತಿ: ಗೋದಾವರಿ ನದಿ ನೀರಿನ ಮಟ್ಟ ದಿನೇ ದಿನೆ ಏರಿಕೆಯಾಗುತ್ತಿದ್ದು, ರವಿವಾರ ಗಂಗಾಪುರ ಡ್ಯಾಂನಿಂದ 4 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ. ಎಚ್ಚರಿಕೆ ವಹಿಸುವಂತೆ ನದಿಪಾತ್ರದ ಜನರಿಗೆ ಸರಕಾರ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next