Advertisement

ಕಾಸರಗೋಡು: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು

04:01 PM Jan 04, 2017 | |

ಕಾಸರಗೋಡು: ಇಲ್ಲಿನ ಉಪ್ಪಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಮಂಗಲಪಾಡಿ ಪಂಚಾಯತ್‌ ಎದುರು ಕಂಟೇನರ್‌ ಲಾರಿ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. 

Advertisement

ಮೃತರು ತ್ರಿಚೂರಿನ ಚೆಲಕ್ಕಾರ ನಿವಾಸಿಗಳಾದ ರಾಮ್ ನಾರಾಯಣ್ (52),ಅವರ ಪತ್ನಿ ವತ್ಸಲಾ(48), ಮಕ್ಕಳಾದ ರಂಜಿತ್‌ (20) ಮತ್ತು ನಿತಿನ್ (24) ಎಂದು ತಿಳಿದು ಬಂದಿದೆ.

ಮಗನಿಗೆ ಮಂಗಳೂರಿನ ಕಾಲೇಜೊಂದರಲ್ಲಿ  ಪ್ರವೇಶ ಪಡೆಯುವ ಸಲುವಾಗಿ ಬಂದು ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next