Advertisement

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

08:59 PM Jun 25, 2024 | Team Udayavani |

ಕಾಸರಗೋಡು: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಮಹಿಳಾ ಕಾಂಗ್ರೆಸ್‌ ನಾಯಕಿ ಮಿನಿಚಂದ್ರನ್‌ ಅವರ ಪುತ್ರ ಪ್ರೀತಂಲಾಲ್‌ ಚಂದ್‌ (22) ಸಾವಿಗೀಡಾದರು.

Advertisement

ಜೂ. 25ರಂದು ಬೆಳಗ್ಗೆ 10 ಗಂಟೆಗೆ ಪಡ್ಪುನಲ್ಲಿರುವ ಮನೆ ಪರಿಸರದಲ್ಲಿ ಮಣ್ಣು ಅಗೆಯುವ ಯಂತ್ರ ಕೆಲಸದಲ್ಲಿ ತೊಡಗಿದಾಗ ಮಗುಚಿ ಬಿದ್ದಿದೆ. ಯಂತ್ರದಡಿ ಸಿಲುಕಿದ ಪ್ರೀತಂಲಾಲ್‌ ಅವರನ್ನು ಸ್ಥಳೀಯರು ಯಂತ್ರದಡಿಯಿಂದ ಹೊರ ತೆಗೆದು ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next