Advertisement

ಕಾಸರಗೋಡು: ಮಳೆಯ ರುದ್ರ ತಾಂಡವ

12:26 AM Aug 11, 2019 | Team Udayavani |

ಕಾಸರಗೋಡು : ಮಳೆಯ ರುದ್ರ ತಾಂಡವದಿಂದ ಕೇರಳದಲ್ಲಿ ಕಳೆದ ಮೂರು ದಿನಗಳಲ್ಲಿ ಸತ್ತವರ ಸಂಖ್ಯೆ 46 ಕ್ಕೇರಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ. ಇದೇ ವೇಳೆ ಸೋಮವಾರದ ತನಕ ತೀವ್ರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದ್ದು, ಕಾಸರಗೋಡು ಸಹಿತ ಕೇರಳದ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಶನಿವಾರ ಬೆಳಗ್ಗೆ ನೀರಿನ ಹೊಂಡಕ್ಕೆ ಬಿದ್ದು ಪಯ್ಯನ್ನೂರಿನ ಕೃಷ್ಣನ್‌(70) ಅವರು ಸಾವಿಗೀಡಾದರು. ಮಲಪ್ಪುರಂ ಜಿಲ್ಲೆಯ ಕಳವಪ್ಪಾರ ಪ್ರದೇಶವು ನೀರು ಮತ್ತು ಭೂಕುಸಿತದಿಂದ ಕೊಚ್ಚಿಕೊಂಡು ಹೋಗಿವೆ. ಇಲ್ಲಿ 45 ರಷ್ಟು ಮಂದಿ ಮಣ್ಣಿನಡಿ ಸಿಲುಕಿ ಕೊಂಡಿರುವುದಾಗಿ ಶಂಕಿಸಲಾಗಿದೆ.ವಯನಾಡಿನ ಮೇಪ್ಪಾಡಿ ಪುತ್ತನ್‌ಮಲೆಯಲ್ಲಿ 9 ಮೃತ ದೇಹಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next