Advertisement

Kasaragod ಪೊಲೀಸರಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆ ಯತ್ನ: ಕೇಸು

11:53 PM Aug 14, 2024 | Team Udayavani |

ಕಾಸರಗೋಡು: ಮಾದಕ ವಸ್ತು ಬೇಟೆಗಾಗಿ ತೆರಳಿದ ಪೊಲೀಸರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಸಂಬಂಧ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ನಾಸರ್‌ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಕಾಸರಗೋಡು ಎ.ಆರ್‌. ಕ್ಯಾಂಪಿನ ಪೊಲೀಸ್‌ ನಿತಿನ್‌ ಗಾಯಗೊಂಡಿದ್ದು, ಅವರನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ರಹಸ್ಯ ಮಾಹಿತಿಯಂತೆ ಎಸ್‌.ಐ. ನಿಖೀಲ್‌ ನೇತೃತ್ವದಲ್ಲಿ ಪೊಲೀಸರು ಉಪ್ಪಳದಲ್ಲಿ ತಪಾಸಣೆಗೆ ಮುಂದಾಗಿದ್ದರು.

ಈ ಸಂದರ್ಭ ಪೊಲೀಸ್‌ಗೆ ಢಿಕ್ಕಿ ಹೊಡೆಸಿ ವೇಗದಲ್ಲಿ ಸಾಗಿ ಪರಾರಿಯಾಗಿದ್ದಾನೆ. ನಾಸರ್‌ ಜತೆಯಲ್ಲಿ ಇನ್ನೋರ್ವ ಇದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next