Advertisement

Kasaragod: ಅಕ್ರಮ ಚಿನ್ನ ಸಾಗಾಟ; ಓರ್ವನ ಬಂಧನ

08:17 PM Oct 21, 2023 | Team Udayavani |

ಕಾಸರಗೋಡು: ದೇಹದೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ 46 ಲಕ್ಷ ರೂ. ಮೌಲ್ಯದ 862 ಗ್ರಾಂ ಚಿನ್ನವನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಕಸ್ಟಮ್ಸ್‌ ಅಧಿಕಾರಿಗಳು ಈ ಸಂಬಂಧ ಕಾಸರಗೋಡು ನಿವಾಸಿ ಹಂಸ ಆಶಿಫ್‌ನನ್ನು ಬಂಧಿಸಿದ್ದಾರೆ.

Advertisement

ಶುಕ್ರವಾರ ಮುಂಜಾನೆ 4.30ಕ್ಕೆ ಶಾರ್ಜಾದಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಹಂಸ ಆಶಿಫ್‌ ಗುದ ದ್ವಾರದೊಳಗೆ ಮೂರು ಮಾತ್ರೆಗಳ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದನು.

ಸಿಡಿಲು ಬಡಿದು ಮನೆಗೆ ಹಾನಿ
ಕಾಸರಗೋಡು: ಪರಿಯಾರ ಸಮೀಪದ ಸಾಲೇಕ್ರದಲ್ಲಿರುವ ಎಂಡೋಸಲ್ಫಾನ್‌ ಸಂತ್ರಸ್ತೆ ರಿಯಾ ಮತ್ತು ಅವರ ಕುಟುಂಬ ವಾಸವಿದ್ದ ಮನೆಗೆ ಸಿಡಿಲು ಬಡಿದಿದೆ. ಮನೆ ಪಕ್ಕದ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ಸಿಡಿಲಿನಿಂದಾಗಿ ಮನೆಗೆ ಬೆಂಕಿ ಹತ್ತಿಕೊಂಡು ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯರು ಬೆಂಕಿಯನ್ನು ಆರಿಸಿದರು. ಸಾಲೇಕ್ರದ ರವಿ, ಕಲ್ಯೋಟ್‌ನ ಶೋಭಾ ಅವರ ಮನೆಗೂ ಸಿಡಿಲು ಬಡಿದಿದೆ. ಮನೆಗೋಡೆ ಬಿರುಕು ಬಿಟ್ಟಿದೆ. ಮನೆಯ ವಯರಿಂಗ್‌ ಹಾನಿಗೀಡಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next