Advertisement

Kasaragod ಅರಣ್ಯಪಾಲಕರ ಮೇಲೆ ನಕ್ಸಲರಿಂದ ಗುಂಡು: ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ

01:37 AM Nov 01, 2023 | Team Udayavani |

ಕಾಸರಗೋಡು: ಆರಳಂ ವನ್ಯಜೀವಿ ಕೇಂದ್ರದ ಚಾವಚ್ಚದಲ್ಲಿ ಅರಣ್ಯ ಪಾಲಕರ ಮೇಲೆ ಗುಂಡು ಹಾರಾಟ ನಡೆಸಿದ ನಕ್ಸಲರ ತಂಡವನ್ನು ಪತ್ತೆಹಚ್ಚಲು ತೀವ್ರ ಶೋಧ ನಡೆಯುತ್ತಿದೆ.

Advertisement

ಅರಣ್ಯ, ಪೊಲೀಸ್‌ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ತಂಡರ್‌ ಬೋಲ್ಟ್ ಕೂಡ ಶೋಧ ಕಾರ್ಯಕ್ಕಾಗಿ ಆರಳಂಗೆ ಆಗಮಿಸಿದೆ. ಗುಂಡು ಹಾರಾಟ ನಡೆದ ಪ್ರದೇಶಗಳ ಸಹಿತ ವಿವಿಧೆಡೆಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ.

ಕಣ್ಣೂರಿನ ಮಲೆನಾಡು ವಲಯದಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆಂದು ಈ ಹಿಂದೆಯೇ ವರದಿಯಾಗಿತ್ತು. ಆದರೆ ಅಲ್ಲಿ ಗುಂಡು ಹಾರಾಟ ನಡೆದಿರುವುದು ಇದೇ ಮೊದಲು.

 

Advertisement

Udayavani is now on Telegram. Click here to join our channel and stay updated with the latest news.

Next