Advertisement

Crime News ಕಾಸರಗೋಡು ಅಪರಾಧ ಸುದ್ದಿಗಳು

07:04 PM Oct 24, 2023 | Team Udayavani |

ನೇಣು ಬಿಗಿದು ಆತ್ಮಹತ್ಯೆ
ಪೆರ್ಲ: ಎಣ್ಮಕಜೆ ನಡುಬೈಲ್‌ ನಿವಾಸಿ, ಟೈಲ್ಸ್‌ ಕಾರ್ಮಿಕ ದಿ|ನಾರಾಯಣ ನಾಯ್ಕ ಅವರ ಪುತ್ರ ಚಂದ್ರಶೇಖರ(38) ಅವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಬಾಲಕಿಗೆ ಲೈಂಗಿಕ ಕಿರುಕುಳ : ಮದ್ರಸಾ ಅಧ್ಯಾಪಕನ ಬಂಧನ
ಕಾಸರಗೋಡು: ಹದಿನಾಲ್ಕರ ಹರೆಯದ ಬಾಲಕಿಗೆ ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ಮುನ್ನಾಡ್‌ ಕೊಟ್ಟೋಡಿ ನಿವಾಸಿ ಸಿ.ಅಬ್ದುಲ್‌ ರಾಶಿದ್‌(31)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.

ಪಡನ್ನ ಪಂಚಾಯತ್‌ನ ಎಡಚಾಕೈಯ ಮದ್ರಸಾ ಅಧ್ಯಾಪಕನಾಗಿದ್ದ ಆರೋಪಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಬಾಲಕಿಯ ಮನೆಗೂ ಬಂದು ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಫೋಕೊÕà ಕಾನೂನು ಪ್ರಕಾರ ಕೇಸು ದಾಖಲಿಸಿ ಬಂಧಿಸಿದ್ದಾರೆ.

ಮದ್ಯ ಸಹಿತ ಇಬ್ಬರ ಬಂಧನ
ಕಾಸರಗೋಡು: ಚೆಂಗಳದಿಂದ 7.2 ಲೀಟರ್‌ ಮದ್ಯ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ರೇಂಜ್‌ ಕಚೇರಿಯ ಅಧಿಕಾರಿಗಳು ಈ ಸಂಬಂಧ ಚೆರ್ಕಳದ ರಫೀಕ್‌ನನ್ನು ಬಂಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಚೆಂಗಳ ರಾಷ್ಟ್ರೀಯ ಹೆದ್ದಾರಿ ಪರಿಸರದಲ್ಲಿ ಅಕ್ರಮವಾಗಿ ಇರಿಸಿದ್ದ 9.18 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ದಳ ಈ ಸಂಬಂಧ ವಯನಾಡು ಪುಲ್‌ಪಳ್ಳಿ ಪೆರಿಂಙಲ್ಲೂರ್‌ನ ಪುನ್ನತ್‌ ಚಾಲಿಯಿಲ್‌ ವೀಟಿಲ್‌ನ ಮನೋಜ್‌ ಕೆ.ಕೆ(30) ಮತ್ತು ತಿರುವನಂತಪುರ ನೆಡುಮಂಙಾಡ್‌ ಚಟ್ಟೂರು ಆನೆಪ್ಪಾರದ ಅನಿಲ್‌ ಎಸ್‌(42)ನನ್ನು ಬಂಧಿಸಿದೆ.

Advertisement

ನೇಣು ಬಿಗಿದು ಆತ್ಮಹತ್ಯೆ
ಮಂಜೇಶ್ವರ; ಹಾವೇರಿ ಜಿಲ್ಲೆಯ ಹತ್ತಿಮತ್ತೂರು ನಿವಾಸಿ, ಮಂಜೇಶ್ವರ ಕಟ್ಟೆಬಜಾರ್‌ನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ಭೀಮಪ್ಪ(40) ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಸಿದು ಬಿದ್ದು ಸಾವು
ಮಂಜೇಶ್ವರ: ಇಲ್ಲಿನ ಡಾನ್‌ಬಾಸ್ಕೋ ಶಾಲಾ ಬಳಿಯ ನಿವಾಸಿ ದಿ.ಬೌತೀಸ್‌ ಡಿ’ಸೋಜ ಅವರ ಪುತ್ರ ಹೆಂಡ್ರಿ ಡಿ’ಸೋಜ(46) ಅವರು ಚಿಗುರುಪಾದೆಯ ಶೇಂದಿ ಅಂಗಡಿಯಲ್ಲಿ ಕುಸಿದು ಬಿದ್ದು ಸಾವಿಗೀಡಾದರು. ಹಲವು ವರ್ಷಗಳಿಂದ ಅವರು ಶೇಂದಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕುಸಿದು ಬಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ರಸ್ತೆಮಧ್ಯೆ ಸಾವಿಗೀಡಾದರು.

ರೈಲು ಢಿಕ್ಕಿ : ಅಪರಿಚಿತ ವ್ಯಕ್ತಿಯ ಸಾವು
ಕಾಸರಗೋಡು: ಪಳ್ಳಿಕೆರೆಯಲ್ಲಿ ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ. ಮಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಎಗ್ಮೋರ್ ಎಕ್ಸ್‌ಪ್ರೆಸ್‌ ರೈಲುಗಾಡಿ ಢಿಕ್ಕಿ ಹೊಡೆದು ಸಾವು ಸಂಭವಿಸಿತು. ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಳಿ ಶರ್ಟ್‌, ಬಿಳಿ ಧೋತಿ ಧರಿಸಿದ್ದಾರೆ. ಮೃತದೇಹವನ್ನು ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next