Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

12:30 AM Mar 29, 2019 | Sriram |

ಬಾಲಕಿಗೆ ಕಿರುಕುಳ:
ರಿಕ್ಷಾ ಚಾಲಕನ ಬಂಧನ
ಕುಂಬಳೆ: ಮನೆ ಜಗಲಿಯಲ್ಲಿ ಆಟವಾಡುತ್ತಿದ್ದ ಹನ್ನೊಂದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಉಪ್ಪಳ ಕೈಕಂಬ ನಿವಾಸಿ ರಿಕ್ಷಾ ಚಾಲಕ ಶೆಕ್‌ ಮುಕ್ತಾರ್‌ (44) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.ಬುಧವಾರ ಸಂಜೆ ಬಾಲಕಿ ಆಟವಾಡುತ್ತಿದ್ದು ಆರೋಪಿ ಕಿರುಕುಳ ನೀಡಿದಾಗ ಬಾಲಕಿ ಬೊಬ್ಬೆ ಹೊಡೆದಳು.ಅಷ್ಟರಲ್ಲಿ ಜನ ಸೇರಿದಾಗ ಈತ ಓಡಿ ಪರಾರಿಯಾಗಿದ್ದ ಈತನನ್ನು ಬಳಿಕ ಪತ್ತೆ ಹಚ್ಚಿ ಬಂಧಿಸಿ ಈತನ ವಿರುದ್ಧ ಫೂಕೊÕ ಕೇಸು ದಾಖಲಿಸಲಾಗಿದೆ.

Advertisement

ವಸತಿ ಗೃಹದಲ್ಲಿ ಮಾದಕ ದ್ರವ್ಯ ದಂಧೆ: ಆರೋಪಿಗಳ ಬಂಧನ
ಕುಂಬಳೆ: ವಸತಿ ಗೃಹದಲ್ಲಿ ತಂಗಿ ಮಾದಕ ದ್ರವ್ಯ ವ್ಯವಹಾರ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಾ. 27ರಂದು ಪೆರಿಯ ಸರಕಾರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಜನ್‌ ಮತ್ತು ಶಹಬಾಸ್‌ ಎಂಬರಿಗೆ ಹೆದ್ದಾರಿ ಯಲ್ಲಿ ಕಾರೊಂದು ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಮಾಹಿತಿ ತಿಳಿದ ಪೊಲೀಸರು ಕಾರನ್ನು ಬೆಂಬತ್ತಿ ನಿಲ್ಲಿಸಿದಾಗ ಕಾರಿನಲ್ಲಿ 5.8 ಗ್ರಾಂ ಹಶಿಶ್‌ ಪತ್ತೆಯಾಯಿತು.ಕಾರಿನಲ್ಲಿದ್ದ ಕಣ್ಣೂರು ಅಳೊಕೋಡಿನ ವಿ.ಎನ್‌. ಸಫಾÌನ್‌ (25) ಎಂಬಾತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದಾಗ ಪಳ್ಳಿಕರೆಯಲ್ಲಿ ವಸತಿ ಗೃಹ ಒಂದರಲ್ಲಿ ಇನ್ನಿಬ್ಬರು ಮಿತ್ರರೊಂದಿಗೆ ತಂಗಿ ಮಾದಕದ್ರವ್ಯ ಮಾರಾಟ ಮಾಡುವ ದಂಧೆಯ ವಿವರ ತಿಳಿದು ವಸತಿಗೃಹಕ್ಕೆ ತೆರಳಿ ಅಲ್ಲಿ ಶೇಖರಿಸಿಟ್ಟಿದ್ದ 10 ಗ್ರಾಂ.ಹ್ಯಾಶಿಶ್‌ ಆಯಿಲ್‌, ಸಿರಿಂಜ್‌, ಮಾದಕ ಸಿಗರೇಟ್‌ಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಯಿತು.ಬಳಿಕ ಈತನ ಮಿತ್ರರಾದ ಟಿ.ಎ. ಅಶ್ರಫ್‌ (26) ಮತ್ತು ಇಲ್ಯಾಸ್‌ (30 ) ಅವರನ್ನು ಮೇಲ್ಪರಂಬ ಪೊಲೀಸರು ಬಂಧಿಸಿ ಕೇಸು ದಾಖಲಿಸಿರುವರು.

ಹಲ್ಲೆ ಪ್ರಕರಣದ ಆರೋಪಿ ಬಂಧನ
ಕುಂಬಳೆ: ಕಳೆದ 2017 ರ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಮಂಜೇಶ್ವರ ವಾಮಂಜೂರಿನ ಸೋನಾ ಯಾನೆ ಸೋನಲ್‌ (22) ಎಂಬಾತನನ್ನು ಮಂಜೇಶ್ವರ ಪೊಲೀಸರು Eಬಂಧಿಸಿದ್ದಾರೆ.
ಪ್ರಕರಣದ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಕ್ಷೇತ್ರದ ಜಾತ್ರೆಯಲ್ಲಿ ಗಲಭೆ : ಪಾನಮತ್ತ ತಂಡದ ಬಂಧನ
ಕುಂಬಳೆ: ನೆಕ್ರಾಜೆ ಪೈಕ ಪೂಮಾಣಿ ಕಿನ್ನಿಮಾಣಿ ಕೇÒತ್ರದ ವಾರ್ಷಿಕ ಜಾತ್ರೆಯಲ್ಲಿ ಮದ್ಯಪಾನಗೈದು ಗಲಭೆ ನಡೆಸಿದ ನೆಲ್ಲಿಕಟ್ಟೆ ಪೈಕ ನಿವಾಸಿಗಳಾದ ದಾಮೋದರ,
ಗಿರೀಶ್‌, ಸುಧೀಶ್‌, ರಂಜಿತ್‌ ಮತ್ತು ಉಮೇಶ್‌ ಎಂಬವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

Advertisement

ಕಸಕ್ಕೆ ಹಚ್ಚಿದ ಬೆಂಕಿ ತಗುಲಿ
ಬಾಲಕನಿಗೆ ಗಾಯ
ಕುಂಬಳೆ: ಸುಟ್ಟ ಗಾಯದೊಂದಿಗೆ ಶಿರಿಬಾಗಿಲು ಸರಕಾರಿ ವಿದ್ಯಾಲಯದ ವಿದ್ಯಾರ್ಥಿ ಜಿಷ್ಣು (7)ವ‌ನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆವರಣದೊಳಗೆ ಕಸಕಡ್ಡಿ ರಾಶಿಗೆ ಬೆಂಕಿ ತಗಲಿದಾಗ ಇದರಿಂದ ಬಾಲಕನಿಗೆ ಬೆಂಕಿ ತಗಲಿರುವುದಾಗಿದೆ.

ಕಾರು -ಬೈಕ್‌ ಢಿಕ್ಕಿ :
ಯುವಕನಿಗೆ ಗಾಯ
ಕುಂಬಳೆ : ಮಂಜೇಶ್ವರ ಪೊಸೋಟು ಎಂಬಲ್ಲಿ ಕಾರು ಮತ್ತು ಬೈಕ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಉದ್ಯಾವರ ನಿವಾಸಿ ಮೊಹಮ್ಮದ್‌ ಮೊರಾಸ್‌ (22) ಎಂಬವರು ಗಾಯಗೊಂಡು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿರುವರು.ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜೀಪ್‌ಬೈಕ್‌ ಢಿಕ್ಕಿ :
ಯುವಕನಿಗೆ ಗಾಯ
ಕುಂಬಳೆ: ರಾಜಪುರದ ಬನ್ನತ್ತಿಕಾನ ಎಂಬಲ್ಲಿ ಬೈಕ್‌ ಮತ್ತು ಜೀಪು ಢಿಕ್ಕಿಯಾಗಿ ಬೈಕ್‌ ಸವಾರ ಚೆಂಗಳ ಕಾನತ್ತಮೂಲೆ ನಿವಾಸಿ ಮಹಮ್ಮದ್‌ ಮುನಾಫ್‌ (24)ಎಂಬವರು ಗಾಯಗೊಂಡು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿರುವರು.

Advertisement

Udayavani is now on Telegram. Click here to join our channel and stay updated with the latest news.

Next